ದೃಶ್ಯ 2, ಮೂಲ ಕಥೆಗೆ ಹತ್ತಿರವಾಗಿಲ್ಲ ಯಾಕೆ?

0

ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್ ಮತ್ತೆ ಥಿಯೇಟರ್‌ನಲ್ಲಿ ಅಬ್ಬರಿಸಿದ್ದಾರೆ. 2014ರಲ್ಲಿ ಮಲಯಾಳಂನ ದೃಶ್ಯಂ ಸಿನಿಮಾ ಕನ್ನಡದಲ್ಲಿ ದೃಶ್ಯ ಹೆಸರಿನಲ್ಲಿ ರಿಲೀಸ್ ಆಗಿತ್ತು. ಅಲ್ಲದೇ ದೊಡ್ಡ ಹಿಟ್ ಕೂಡ ತನ್ನದಾಗಿಸಿಕೊಂಡಿತ್ತು. ಕಥೆಯಲ್ಲಿ ಅಂತಹ ಕುತೂಹಲ ಇರೋದರಿಂದ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಇದೀಗ ದೃಶ್ಯ ಸಿನಿಮಾದ ಪಾರ್ಟ್ 2 ಕೂಡ ಇಂದು (ಡಿಸೆಂಬರ್ 10) ರಿಲೀಸ್ ಆಗಿದ್ದು ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.

2014ರಲ್ಲಿ ಇದ್ದ ರಾಜೇಂದ್ರ ಪೊನ್ನಪ್ಪನಿಗೂ ಈಗಿನ ರಾಜೇಂದ್ರ ಪೊನ್ನಪ್ಪನಿಗೂ ಯಾವುದೇ ವ್ಯತ್ಯಾಸ ಇಲ್ಲ. ಅಷ್ಟು ಅಚ್ಚುಕಟ್ಟಾಗಿ ರವಿಚಂದ್ರನ್ ಅವರ ಅಭಿನಯ ಸಿನಿಮಾದಲ್ಲಿ ಮೂಡಿ ಬಂದಿದೆ. ಹೊಡಿ ಬಡಿ ಸಿನಿಮಾಗಳ ನಡುವೆ ಇಂಥ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಜನ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪ ಐಜಿ ಹುದ್ದೆಯ ರೂಪಾ ಚಂದ್ರಶೇಖರ್ ಅವರ ಪುತ್ರ ತರುಣ್ ಚಂದ್ರಶೇಖರ್ ಕೊಲೆಯಾಗಿರುತ್ತಾರೆ. ಕೊಲೆಯಾದ ಬಳಿಕ ಶವವನ್ನು ರಾಜೇಂದ್ರ ಪೊನ್ನಪ್ಪ ಆಗಷ್ಟೇ ನಿರ್ಮಾಣ ಹಂತದಲ್ಲಿದ್ದ ಪೋಲೀಸ್ ಠಾಣೆಯಲ್ಲಿ ಹುದುಗಿ ಹಾಕಿದ್ದರು. ನಂತರ ಇಡೀ ಕುಟುಂಬ ಭಯದಲ್ಲೆ ಜೀವನ ನಡೆಸುತ್ತಿರುತ್ತೆ. ಹೀಗೆ ಸಾಗಿದ್ದ ಕಥೆ ದೃಶ್ಯ 2 ನಲ್ಲಿ ಏನಾಗುತ್ತೆ, ರಾಜೇಂದ್ರ ಪೊನ್ನಪ್ಪ ಈ ಸಂಕಷ್ಟದಿಂದ ತನ್ನ ಕುಟುಂಬವನ್ನು ಪಾರು ಮಾಡುತ್ತಾನಾ ಅನ್ನೋದೆ ಸಿನಿಮಾದ ಸಾರಾಂಶ.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್