ಮನೆ ಅಪರಾಧ ಇ–ಸ್ವತ್ತು ನೀಡಲು 1 ಲಕ್ಷ ಲಂಚ: ನಗರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

ಇ–ಸ್ವತ್ತು ನೀಡಲು 1 ಲಕ್ಷ ಲಂಚ: ನಗರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

0

ಮೈಸೂರು: ಇಲ್ಲಿನ ಹೂಟಗಳ್ಳಿ ನಗರಸಭೆಯ ಕಂದಾಯ ನಿರೀಕ್ಷಕ ಮಂಜುನಾಥ್‌ ಇ–ಸ್ವತ್ತು ನೀಡಲು ₹1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

Join Our Whatsapp Group

ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಕುಮಾರ್ ಎಂಬುವರು ನಗರಸಭೆ ವ್ಯಾಪ್ತಿಯ ಆಸ್ತಿಯೊಂದಕ್ಕೆ ಇ–ಸ್ವತ್ತು ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದರು. ‌ಅದನ್ನು ನೀಡಲು ಆರೋಪಿ ಮಂಜುನಾಥ್ ₹ 3 ಲಕ್ಷ ಕೇಳಿದ್ದರು. ಬೇಸತ್ತ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಅಧಿಕಾರಿಗಳ ಸೂಚನೆಯಂತೆ ನಗರಸಭೆ ಕಾರ್ಯಾಲಯದಲ್ಲಿ ಲಂಚದ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಎಸ್‌.ಪಿ. ಸುರೇಶ್ ಬಾಬು ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ನಗದು ಸಮೇತ ಆರೋಪಿಯನ್ನು ವಶಕ್ಕೆ ಪಡೆಯಿತು.

ಹಿಂದಿನ ಲೇಖನಅದ್ಭುತ ಕ್ಯಾಚ್ ಹಿಡಿದ ಅಶ್ವಿನ್: ದಿಂಡಿಗಲ್ ಡ್ರಾಗನ್ಸ್ ತಂಡಕ್ಕೆ 1 ರನ್ ​ಗಳ ರೋಚಕ ಗೆಲುವು
ಮುಂದಿನ ಲೇಖನಚಾಕೋಲೇಟ್ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 52 ವರ್ಷದ ಕಾಮುಕನ ಬಂಧನ