ಮಧುರೈ(ತಮಿಳುನಾಡು): ಮಧುರೈ ಕಲ್ಲಜಗರ್ ಉತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ.
ವಿಶ್ವವಿಖ್ಯಾತ ಮಧುರೈ ಚಿತ್ರೈ ಉತ್ಸವವು ಧ್ವಜಾರೋಹಣದೊಂದಿಗೆ ಆರಂಭವಾಗಿದೆ. ಉತ್ವದ ಪ್ರಮುಖ ಆಕರ್ಷಣೆಯಾದ ಸ್ವಾಮಿ ಕಲ್ಲಜಗರ್ ಸುಂದರರಾಜ ಪೆರುಮಾಳ್ ಚಿನ್ನದ ಕುದುರೆಯನ್ನೇರಿ ಬಳಿಕ ವೈಗೈ ನದಿಯಲ್ಲಿ ಮೀಯುವುದನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದ 90 ವರ್ಷದ ವೃದ್ಧ ಮತ್ತು ಇನ್ನೊಬ್ಬ ಮಹಿಳೆ ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.