ಮನೆ ಸುದ್ದಿ ಜಾಲ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

0

ಮೈಸೂರು (Mysuru): ಇಂದು ಮೈಸೂರಿನ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಆಯೋಜಿಸಿದ್ದ ಕೈಗಾರಿಕಾ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು.

ಮೈಸೂರು ಕೈಗಾರಿಕೆಗಳ ಸಂಘ, ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಹೆಬ್ಬಾಳು ಕೈಗಾರಿಕಾ ವಸಾಹತು ಉತ್ಪಾದಕರ ಸಂಘ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಶಸ್ತಿ ಪುರಸ್ಕೃತರಾದ ನೆಶ್ಚರ್ ಫ್ರೆಶ್ ಮತ್ತು ನಮನ್ ಸಂಸ್ಥಾಪಕ ಪಾಲುದಾರರು, ವುಮೆನ್ ಟ್ರಾನ್ಸ್ ಫರ್ಮಿಂಗ್ ಇಂಡಿಯಾ ಆವಾರ್ಡ್ ನೀತಿ ಆಯೋಗದ ಶ್ರೀಮತಿ ಛಾಯಾ ನಂಜಪ್ಪ, ಎಜಿಟೆಲ್ ಕ್ಯಾಡ್ ಇಂಜಿನಿಯರಿಂಗ್ ಸಿಇಓ ಶ್ರೀ ಎನ್.ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ‌ ಐಎಂಎಸ್ ಫೌಂಡೇಷನ್ ಅಧ್ಯಕ್ಷರು ಶ್ರೀ ಹೆಚ್.ವಿ.ಎಸ್.ಕೃಷ್ಣ, ಮೈಸೂರು ವಲಯ ಲಘು ಉದ್ಯೋಗ ಭಾರತಿ ಅಧ್ಯಕ್ಷರು ಶ್ರೀ ಡಾ.ಎಂ.ಮಹೇಶ್ ಶೆಣೈ, ಎಂಡಿಎಸ್ಎಸ್ಎ ಅಧ್ಯಕ್ಷರಾದ ಶ್ರೀ ಎ.ಎಸ್.ಸತೀಶ್, ಹಿಮಾ ಅಧ್ಯಕ್ಷರಾದ ಶ್ರೀ ಜಯಂತ್, ಎಂಎಸ್ಎಂಇಸಿ ಅಧ್ಯಕ್ಷರಾದ ರವಿಕೋಟಿ ಮತ್ತಿತರರು ಉಪಸ್ಥಿತರಿದ್ದರು.