ಮನೆ ಕಾನೂನು ಜ್ಞಾನವಾಪಿ ಮಸೀದಿ ಪ್ರಕರಣ:  ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ನ್ಯಾ.ರವಿಕುಮಾರ್​ ದಿವಾಕರ್​ ಬರೇಲಿಗೆ ವರ್ಗಾವಣೆ

ಜ್ಞಾನವಾಪಿ ಮಸೀದಿ ಪ್ರಕರಣ:  ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ನ್ಯಾ.ರವಿಕುಮಾರ್​ ದಿವಾಕರ್​ ಬರೇಲಿಗೆ ವರ್ಗಾವಣೆ

0

ವಾರಾಣಸಿ(Varanasi): ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ವಾರಾಣಸಿ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರನ್ನು ಬರೇಲಿಗೆ ವರ್ಗಾವಣೆ ಮಾಡಲಾಗಿದ್ದು, ಜುಲೈ 4ರೊಳಗೆ ಅಧಿಕಾರ ವಹಿಸಿಕೊಳ್ಳಲು ಆದೇಶಿಲಾಗಿದೆ.

ಸೋಮವಾರ ಸಂಜೆ ಅಲಹಾಬಾದ್ ಹೈಕೋರ್ಟ್‌ನಿಂದ ವರ್ಗಾವಣೆಗೊಂಡ 121 ಸಿವಿಲ್ ನ್ಯಾಯಾಧೀಶರಲ್ಲಿ ಇವರೂ ಸೇರಿದ್ದಾರೆ. ವರ್ಗಾವಣೆಗೊಂಡ ನ್ಯಾಯಾಧೀಶರು ಜುಲೈ 4 ರೊಳಗೆ ಅಧಿಕಾರ ವಹಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ದಿವಾಕರ್ ವರ್ಗಾವಣೆಗೂ ಹಾಗೂ ವಿಚಾರಣೆ ನಡೆಸುತ್ತಿರುವ ಸೂಕ್ಷ್ಮ ಜ್ಞಾನವಾಪಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿವೆ.

ಪ್ರಕರಣದ ವಿಚಾರಣೆ ವೇಳೆ ದಿವಾಕರ್ ಕೂಡ ತಮಗೆ ಜೀವ ಬೆದರಿಕೆ ಇದ್ದ ಕಾರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಅವರ ಭದ್ರತೆಯನ್ನು ಮೇಲ್ದರ್ಜೆಗೆ ಏರಿಸಿತ್ತು.