ಮನೆ ಮನರಂಜನೆ ಅತ್ತೆಯ ಕಣ್ಣುಗಳನ್ನು ದಾನ ಮಾಡಿದ ತೆಲುಗು ನಟ ಚಿರಂಜೀವಿ

ಅತ್ತೆಯ ಕಣ್ಣುಗಳನ್ನು ದಾನ ಮಾಡಿದ ತೆಲುಗು ನಟ ಚಿರಂಜೀವಿ

0

ತೆಲುಗು ನಟ ಪದ್ಮಶ್ರೀ ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಮತ್ತು ಜನಪ್ರಿಯ ನಟ ಅಲ್ಲು ಅರ್ಜುನ್ ಅವರ ಅಜ್ಜಿ ಮೌಂಟ್ ಅಲ್ಲು ಕನಕರತ್ನಂ (94) ಆ.30 ರಂದು ನಿಧನರಾದರು. ಅವರ ಕೊನೆ ಆಸೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಇದಕ್ಕೆ ಅಳಿಯ ಮೆಗಾಸ್ಟಾರ್‌ ಚಿರಂಜೀವಿ ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಅತ್ತೆಯ ನಿಧನಕ್ಕೆ ಸಂತಾಪ ಸೂಚಿಸಿರುವ ಚಿರಂಜೀವಿಯವರು, ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಕನಕರತ್ನಮ್ಮ ಅವರ ನಿಧನವು ಅತ್ಯಂತ ದುಃಖಕರ ವಿಚಾರವಾಗಿದೆ. ಅವರು ನಮ್ಮ ಕುಟುಂಬಗಳಿಗೆ ತೋರಿಸಿದ ಪ್ರೀತಿ, ಧೈರ್ಯ ಮತ್ತು ಜೀವನ ಮೌಲ್ಯಗಳು ನಮಗೆ ಶಾಶ್ವತವಾಗಿ ಸ್ಫೂರ್ತಿ, ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.