ಮನೆ ರಾಷ್ಟ್ರೀಯ ಏಕನಾಥ್ ಶಿಂಧೆ ಬಣಕ್ಕೆ ಜಿಗಿದ ಮತ್ತೊಬ್ಬ ಸಚಿವ: ಠಾಕ್ರೆ ಜೊತೆ ಉಳಿದರುವ ಏಕಮಾತ್ರ ಸಚಿವ ಮಗ...

ಏಕನಾಥ್ ಶಿಂಧೆ ಬಣಕ್ಕೆ ಜಿಗಿದ ಮತ್ತೊಬ್ಬ ಸಚಿವ: ಠಾಕ್ರೆ ಜೊತೆ ಉಳಿದರುವ ಏಕಮಾತ್ರ ಸಚಿವ ಮಗ ಆದಿತ್ಯ ಠಾಕ್ರೆ

0

ಮುಂಬೈ (Mumbai): ಬಂಡಾಯ ನಾಯಕ ಏಕನಾಥ್ ಶಿಂಧೆ ಬಣಕ್ಕೆ ಮತ್ತೊಬ್ಬ ಸಚಿವ ಜಿಗಿದಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರದಲ್ಲಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾಗಿರುವ ಉದಯ್ ಸಾಮಂತ್ ಅವರು ಏಕನಾಥ್ ಶಿಂಧೆ ನೇತೃತ್ವದ ಬಂಡಾಯದ ಬಣಕ್ಕೆ ಜಿಗಿದಿದ್ದಾರೆ.

ಸಾಮಂತ್‌ ಅವರು ಶಿಂಧೆ ಬಣವನ್ನು ಸೇರಿಕೊಂಡ ಎಂಟನೇ ಸಚಿವ ಎನಿಸಿಕೊಂಡಿದ್ದಾರೆ. ಸಾಮಂತ್ ಮಹಾರಾಷ್ಟ್ರದಿಂದ ಗುವಾಹಟಿಗೆ ತೆರಳಿದ್ದಾರೆ. ಆದಿತ್ಯ ಠಾಕ್ರೆ ಅವರ ಆಪ್ತ ಸಹವರ್ತಿ ಎಂದು ಗುರುತಿಸಲಾಗಿದ್ದ ಸಾಮಂತ್ ಅವರು ಕೆಲವು ದಿನಗಳಿಂದ ಉದ್ಧವ್ ಠಾಕ್ರೆ ಅವರ ಸಭೆಗಳಲ್ಲಿ ಕಾಣಿಸಿಕೊಂಡಿದ್ದರು.

ವಿಧಾನಸಭೆಯಲ್ಲಿ ಸಂಪುಟ ಸಚಿವರ ಪೈಕಿ, ಉದ್ಧವ್ ಠಾಕ್ರೆ ಜತೆ ಈಗ ಉಳಿದಿರುವ ಶಿವಸೇನಾದ ಸಚಿವರೆಂದರೆ ಅವರ ಮಗ ಆದಿತ್ಯ ಠಾಕ್ರೆ ಮಾತ್ರ! ಉಳಿದ ಇನ್ನಿಬ್ಬರು ಸಚಿವರಾದ ಸುಭಾಶ್ ದೇಸಾಯಿ ಮತ್ತು ಅನಿಲ್ ಪರಬ್ ಅವರು ವಿಧಾನ ಪರಿಷತ್‌ನಿಂದ ಆಯ್ಕೆಯಾದವರು. ಇನ್ನೊಬ್ಬ ಸಂಪುಟ ಸಚಿವ ಶಂಕರರಾವ್ ಗಡಾಖ್ ಅವರು ಕ್ರಾಂತಿಕಾರಿ ಶೆಟ್ಕಾರಿ ಪಕ್ಷದವರು.

ಏಕನಾಥ್ ಶಿಂಧೆ, ದಾದಾ ಭುಸೆ, ಗುಲಾಬ್‌ರಾವ್ ಪಾಟೀಲ್, ಸಂದೀಪನ್ ಭೂಮ್ರೆ, ಉದಯ್ ಸಾಮಂತ್ ಬಂಡಾಯ ಶಾಸಕರ ಗುಂಪಿನಲ್ಲಿನ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇನ್ನು, ಶಂಭುರಾಜ್ ದೇಸಾಯಿ, ಅಬ್ದುಲ್ ಸತ್ತಾರ್, ರಾಜೇಂದ್ರ ಪಾಟೀಲ್ ಯೆದ್ರೋಕರ್ ಮತ್ತು ಬಚ್ಚು ಕಡು (ಪ್ರಹಾರ್ ಜನಶಕ್ತಿ ಪಕ್ಷ) ಶಿಂಧೆ ಬಣದಲ್ಲಿರುವ ರಾಜ್ಯ ಖಾತೆ ಸಚಿವರಾಗಿದ್ದಾರೆ.