ಬೆಂಗಳೂರಿಂದ ರಾಜಸ್ಥಾನದ ಜೋಧಪುರ್ಗೆ ಹೊರಟಿದ್ದ, ಖಾಸಗಿ ಬಸ್ಸಿನ ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇಳಕಲ್ ತಾಲೂಕಿನ ಗೂಡೂರು ಬಳಿ ಬಿಆರ್ ಟ್ರಾವೆಲ್ಸ್ ಬಸ್ ಚಲಿಸುತ್ತಿದ್ದಾಗ ಹೊಗೆ ಕಾಣಿಸಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾನೆ.
ಪ್ರಯಾಣಿಕರು ಲಗೇಜ್ನೊದಿಗೆ ಬಸ್ನಿಂದ ಕೆಳಗೆ ಇಳಿದಿದ್ದಾರೆ. ಈಗ ಇಳಕಲ್ನಿಂದ ಮೆಕ್ಯಾನಿಕ್ ಕರೆಸಿ ರಿಪೇರಿ ಕೆಲಸ ಆರಂಭವಾಗಿದೆ. ರಿಪೇರಿ ಯಶಸ್ವಿಯಾದರೆ, ಈ ಬಸ್ಸು ರಾಜಸ್ಥಾನಕ್ಕೆ ತೆರಳಲಿದೆ. ರಿಪೇರಿ ಆಗದೇ ಇದ್ದರೆ ಬೇರೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗುವುದು ಎಂದು ಬಿಆರ್ ಟ್ರಾವೆಲ್ಸ್ ತಿಳಿಸಿದೆ.















