ಮನೆ ಅಪರಾಧ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಗೆ 40 ಬಾರಿ ಇರಿತ: ಸಿಸಿಟಿವಿಯಲ್ಲಿ ಸೆರೆ

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಗೆ 40 ಬಾರಿ ಇರಿತ: ಸಿಸಿಟಿವಿಯಲ್ಲಿ ಸೆರೆ

0

ಹುಬ್ಬಳ್ಳಿ(Hubballi): ಸರಳ ವಾಸ್ತು ತಜ್ಞ ಚಂದ್ರಶೇಖರ ಗೂರುಜಿ ಅವರ ಎದೆಯ ಭಾಗಕ್ಕೆ 35 ರಿಂದ 40 ಕಡೆಗಳಲ್ಲಿ ಚಾಕುವಿನಿಂದ ದುಷ್ಮರ್ಮಿಗಳು ಇರಿದಿದ್ದು, ಕುತ್ತಿಗೆ ಬಲ ಭಾಗವನ್ನು ಕತ್ತರಿಸಿದ್ದಾರೆ.

ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದ್ದು, ಇದೊಂದು ಭೀಕರವಾದ ಹತ್ಯೆ ಎಂಬುದು ದೃಶ್ಯಾವಳಿಗಳಿಂದ ತಿಳಿದು ಬರುತ್ತಿದೆ.

ಹತ್ಯೆ ಗುಂಪಿನಲ್ಲಿ ಇದ್ದ ವ್ಯಕ್ತಿಯೊಬ್ನ ಗೂರುಜಿ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದಂತೆ ಮತ್ತೊಬ್ಬ ವ್ಯಕ್ತಿ ಅವರ ಎದೆಗೆ ಇರಿದ್ದಾನೆ. ಅವರು ನೆಲಕ್ಕೆ ಬೀಳುತ್ತಿಂದಂತೆ ಮತ್ತೊಬ್ಬ ವ್ಯಕ್ತಿ ಕೂಡ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ. ಜೊತೆ ತೆಗೆ ಕುತ್ತಿಗೆಯ ಬಲಭಾಗ ಕತ್ತರಿಸುವಂತೆ ಚಾಕೂವಿನಿಂದ ಇರಿಯಲಾಗಿದೆ.

ಆಸ್ತಿ ವಿಚಾರಕ್ಕಾಗಿ ಹತ್ಯೆ ನಡೆದಿರುವ ಸುದ್ದಿಗಳು ಅವರ ಕೊಲೆಯ ನಂತರ ಹರಿದಾಡುತ್ತಿವೆ. ಕೊಲೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.

ಹತ್ಯೆ ಸುದ್ದಿ ನಗರದಲಿ ಹರಡುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಸಂಬಂಧಿಗಳು ದೌಡಾಯಿಸಿ‌ ಶವ ಇಟ್ಟಿರುವ ಕೆಎಂಸಿ ಆಸ್ಪತ್ರೆ ಕಡೆಗೆ ಬರುತ್ತಿದ್ದಾರೆ.

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

ಚಂದ್ರಶೇಖರ ಗುರೂಜಿ ಅವರ ಹತ್ಯೆ ಪ್ರಕರಣದ ತನಿಖೆಗೆ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ವಿಶೇಷ ತಂಡ ನಗರದ ರೈಲು ನಿಲ್ದಾ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಕೆಲವು ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಿ ಅನುಮಾನಾಸ್ಪದ ವಾಹನ ಸವಾರರನ್ನು‌ ಪರಿಶೀಲನೆ ನಡೆಸುತ್ತಿದ್ದಾರೆ.