ಮನೆ ರಾಜ್ಯ ವಿಜಯನಗರ ಉಸ್ತುವಾರಿ ಸಚಿವರಾಗಿ ಆನಂದ್ ಸಿಂಗ ನೇಮಕ: ಸರ್ಕಾರದ ಆದೇಶ

ವಿಜಯನಗರ ಉಸ್ತುವಾರಿ ಸಚಿವರಾಗಿ ಆನಂದ್ ಸಿಂಗ ನೇಮಕ: ಸರ್ಕಾರದ ಆದೇಶ

0

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.

ಜನವರಿ 24ರಂದು ಸರ್ಕಾರ ಆದೇಶ ಹೊರಡಿಸಿ ಆನಂದ್ ಸಿಂಗ್ ಹಾಗೂ ಶಶಿಕಲಾ ಅವರಿಗೆ ಕ್ರಮವಾಗಿ ಕೊಪ್ಪಳ, ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿತ್ತು. ನೂತನ ಜಿಲ್ಲೆ ವೇಗವಾಗಿ ಕಟ್ಟಬೇಕಿದ್ದು, ತನಗೆ ಉಸ್ತುವಾರಿ ವಹಿಸಬೇಕೆಂದು ಆನಂದ್ ಸಿಂಗ್ ಸತತವಾಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದರು.

ಕೊನೆಗೂ ಅವರ ಮಾತಿಗೆ ಮನ್ನಣೆ ದೊರೆತಿದೆ.