ಮನೆ ಅಪರಾಧ ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ: ಗಾಯಗೊಂಡ ಯುವಕ

ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ: ಗಾಯಗೊಂಡ ಯುವಕ

0

ಮೈಸೂರು(Mysuru):  ನಂಜನಗೂಡು ತಾಲೂಕಿನ ಹಾದನೂರು ಒಡೆಯನಪುರದಲ್ಲಿ ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿ ದ್ದು, ಯುವಕ ಗಾಯಗೊಂಡಿದ್ದಾನೆ.

ಪ್ರಸನ್ನ ಕುಮಾರ್ ಹುಲಿ ದಾಳಿಯಿಂದ ಗಾಯಗೊಂಡ ಯುವಕ.

ಈತ ದನ ಮೇಯಿಸುತ್ತಿದ್ದಾಗ ಹಠಾತ್ ಹುಲಿ ದಾಳಿ ಮಾಡಿದ್ದು, ಕೂಡಲೇ ಯುವಕ ಚೀರಾಡಿದ್ದಾನೆ.

ಯುವಕನ ಚೀರಾಟ ಕೇಳಿದ ಕೃಷಿ ಕಾರ್ಮಿಕರು ಕೂಡಲೇ ಆತನ ಸಹಾಯಕ್ಕೆ ಧಾವಿಸಿದ್ದು, ಇದನ್ನು ಗಮನಿಸಿದ ಹುಲಿ, ದನಗಾಹಿ ಬಿಟ್ಟು ಪಕ್ಕದಲ್ಲಿದ್ದ ಹಸುವನ್ನು ಹೊತ್ತೊಯ್ದಿದೆ. ಗಾಯಾಳುವನ್ನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.