ಮನೆ ರಾಜ್ಯ ರಾಜ್ಯದ ಇಂದಿನ ಹವಾಮಾನ ವರದಿ

ರಾಜ್ಯದ ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಆದರೆ ಬೆಳಗಾವಿ, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಬೆಂಗಳೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಬೀದರ್, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ. ಶಿವಮೊಗ್ಗ, ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಇಂದು ಬಿಡುವು ನೀಡಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ 29-20, ಮಂಗಳೂರಿನಲ್ಲಿ 29-24, ಶಿವಮೊಗ್ಗದಲ್ಲಿ 29-21, ಬೆಳಗಾವಿಯಲ್ಲಿ 26-20, ಮೈಸೂರಿನಲ್ಲಿ 31-20, ಮಂಡ್ಯದಲ್ಲಿ 32-21, ಕೊಡಗಿನಲ್ಲಿ 27-17, ರಾಮನಗರದಲ್ಲಿ 32-25, ಹಾಸನದಲ್ಲಿ 29-18, ಚಾಮರಾಜನಗರದಲ್ಲಿ 31-21, ಚಿಕ್ಕಬಳ್ಳಾಪುರದಲ್ಲಿ 30-19, ಕೋಲಾರದಲ್ಲಿ 31-21, ತುಮಕೂರಿನಲ್ಲಿ 30-19, ಉಡುಪಿಯಲ್ಲಿ 29-24, ಚಿಕ್ಕಮಗಳೂರಿನಲ್ಲಿ 27-17, ದಾವಣಗೆರೆಯಲ್ಲಿ 29-21, ಚಿತ್ರದುರ್ಗದಲ್ಲಿ 29-20, ಹಾವೇರಿಯಲ್ಲಿ 29-21, ಬಳ್ಳಾರಿಯಲ್ಲಿ 33-22, ಗದಗದಲ್ಲಿ 29-21, ಕೊಪ್ಪಳದಲ್ಲಿ 31-22, ರಾಯಚೂರಿನಲ್ಲಿ 32-23, ಯಾದಗಿರಿಯಲ್ಲಿ 32-22, ವಿಜಯಪುರದಲ್ಲಿ 29-21, ಬೀದರ್ ನಲ್ಲಿ 28-21, ಕಲಬುರಗಿಯಲ್ಲಿ 30-22, ಬಾಗಲಕೋಟೆಯಲ್ಲಿ 30-22 ಡಿಗ್ರಿ ಸೆಲ್ಸಿಯಸ್‌ ಇದೆ.