ಮನೆ ಅಪರಾಧ ಚಾಮರಾಜನಗರ: ಪಂಕ್ತಿ ಸೇವೆಗೆ ಬಂದಿದ್ದ ಯುವಕರು ನೀರು ಪಾಲು

ಚಾಮರಾಜನಗರ: ಪಂಕ್ತಿ ಸೇವೆಗೆ ಬಂದಿದ್ದ ಯುವಕರು ನೀರು ಪಾಲು

0

ಚಾಮರಾಜನಗರ(Chamarajanagar): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿಗೆ ಪಂಕ್ತಿ ಸೇವೆಗೆ ಬಂದಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಎಂಬ ಗ್ರಾಮದ ಸುನೀಲ್(26) ಹಾಗೂ ಚಂದ್ರು(19) ಮೃತರು.

ಲಿಂಗಪಟ್ಟಣ ಗ್ರಾಮದ 30 ಜನರ ತಂಡದೊಟ್ಟಿಗೆ ಪಂಕ್ತಿ ಸೇವೆಗೆ ಬಂದಿದ್ದ ಈ ಇಬ್ಬರು ಯುವಕರು ದೇವರ ದರ್ಶನ ಪಡೆದು ಪಂಕ್ತಿ ಸೇವೆ ತಡ ಎಂದಿದ್ದಕ್ಕೇ ಹೊಸಮಠದ ಮುಂಭಾಗವಿರುವ ಚೆಕ್ ಡ್ಯಾಂಗೆ ಈಜಲು ತೆರಳಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ.

ಸುನೀಲ್ ಎಂಬಾತನ ಮೃತದೇಹ ಪತ್ತೆಯಾಗಿದ್ದು, ಚಂದ್ರು ಶವಕ್ಕಾಗಿ ನುರಿತ ಈಜುಗಾರರು ಹುಡುಕಾಡುತ್ತಿದ್ದಾರೆ.

ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.