ಮನೆ ರಾಜ್ಯ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ನ್ಯಾಯಾಂಗ ತನಿಖೆಗೆ ಆರ್.ಧ್ರುವನಾರಾಯಣ್ ಒತ್ತಾಯ

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ನ್ಯಾಯಾಂಗ ತನಿಖೆಗೆ ಆರ್.ಧ್ರುವನಾರಾಯಣ್ ಒತ್ತಾಯ

0

ಮೈಸೂರು(Mysuru): ಸಿದ್ದರಾಮಯ್ಯ  ಕಾರಿಗೆ ಮೊಟ್ಟೆ ಎಸೆತ ಘಟನೆ ಸೈನಿಕರ ನಾಡಿನಲ್ಲಿ ಮಾಡಿದ ಹೇಡಿತನ. ಈ ಬಗ್ಗೆ ನ್ಯಾಯಾಂಗ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.

ಇಂದು ನಗರದಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ. ಈ ರೀತಿಯ ಕೃತ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಈ ಕೂಡಲೇ ಗೃಹ ಸಚಿವರು ರಾಜೀನಾಮೆ ನೀಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಇದು ಸರ್ಕಾರದ ಪ್ರಾಯೋಜಿತ ಘಟನೆ. ತನಿಖೆಯಾಗಬೇಕು ಕೊಡಗಿನ ವೀರ ಸಂಸ್ಕೃತಿಗೆ ತಲೆ ತಗ್ಗಿಸುವ ಕೆಲಸ ಬಿಜೆಪಿಗರು ಮಾಡಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಹಾಕಲು  ಬಿಜೆಪಿ ಗಲಭೆಗಳನ್ನ ಸೃಷ್ಟಿಸುತ್ತಿದ್ದಾರೆ. ಮನೆಗೊಬ್ಬ ಸೈನಿಕರಿರುವ ಕೊಡಗಿನಲ್ಲಿ ಮನೆಗೊಬ್ಬ  ಪುಂಡರನ್ನು ಬಿಜೆಪಿ ಹುಟ್ಟುಹಾಕುತ್ತಿದೆ. ಆಗಸ್ಟ್ 26ರಂದು ಮಡಿಕೇರಿ ಚಲೋ  ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದು ಆರ್. ದೃವನಾರಾಯಣ್ ಕಿಡಿಕಾರಿದರು.

ಇಂತಹ ಘಟನೆಗಳಿಗೆ  ಸಿದ್ದರಾಮಯ್ಯ ಹೆದರಲ್ಲ:

ಇದು ಹೇಡಿಗಳ ಕೃತ್ಯ. ಸೈದ್ದಾಂತಿಕವಾಗಿ ಗಟ್ಟಿತನವಿಲ್ಲ ಬಿಜೆಪಿಗರು ಹಿಂಸಾಚಾರಕ್ಕೆ ಇಳಿದಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರಲ್ಲಿ ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲವೋ ಅವರು ಹಿಂಸಾಚಾರಕ್ಕೆ ಇಳಿಯುತ್ತಾರೆ. ಬಿಜೆಪಿಗರು ಪಕ್ಷದವರಿಂದ ಹಿಂಸಾಚಾರ ಮಾಡಿಸುತ್ತಾರೆ. ಒಬ್ಬ ವಿರೋಧ ಪಕ್ಷದ ನಾಯಕನಿಗೆ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ಸಿಗಲು ಸಾಧ್ಯ ಎಂದು ವಾಗ್ದಾಳಿ ನಡೆಸಿದರು.

ಹೋರಾಟದ ಹಿನ್ನೆಲೆಯಿಂದ ಬಂದವರು ಇಂತಹ ಘಟನಗೆ ಎದುರೋದಿಲ್ಲ. ಸರ್ಕಾರದ ವೈಫಲ್ಯ ಮಾರೆಮಾಚಲು ಇಂತಹ ಕೆಲಸಕ್ಕೆ ಇಳಿದಿದ್ದಾರೆ ಎಂದು  ಕಿಡಿಕಾರಿದರು.