ಮನೆ ರಾಜಕೀಯ ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ: ಹೆಚ್.ವಿಶ್ವನಾಥ್

ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ: ಹೆಚ್.ವಿಶ್ವನಾಥ್

0

ಮೈಸೂರು(Mysuru):  ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ, ಜನ ತಮ್ಮ ಆಕ್ರೋಶವನ್ನು ಹೀಗೆ ವ್ಯಕ್ತಪಡಿಸೋದು ಸಹಜ. ಇದಕ್ಕೆ ಹತ್ಯೆ ಯತ್ನದ ಸ್ವರೂಪ ನೀಡುವುದು ಸರಿಯಲ್ಲ.

ಗಾಂಧಿಗೂ,  ಸಿದ್ದರಾಮಯ್ಯಗೂ ಎಲ್ಲಿಂದ ಎಲ್ಲಿಗೆ  ಸಂಬಂಧ ಹೇಳಿ. ಈ ರೀತಿಯ ಹೋಲಿಕೆ ಸರಿಯಲ್ಲ ರಾಜಕೀಯ ನಾಯಕರ ಹತ್ಯೆ ಮಾಡುವಂತಹ  ಕೆಟ್ಟ ವಾತಾವರಣ ರಾಜ್ಯದಲ್ಲಿ ಇಲ್ಲ ಎಂದು ಹೇಳಿದರು.