ಪತಿ-ಪತ್ನಿ ಅಥವಾ ಪ್ರೇಮಿಗಳ ಸಂಬಂಧದಲ್ಲಿ ಕೆಲವೊಂದು ವಿಷ್ಯಗಳು ಬಹಳ ಮುಖ್ಯವಾಗಿರುತ್ತವೆ. ಅವುಗಳ ಕಡೆಗೆ ಗಮನಕೊಡದಿದ್ದಾರೆ ಸಂಬಂಧಗಳು ಹಾಳಾಗಬಹುದು. ನೀವು ಜೀವನದಲ್ಲಿ ಎಂದಿಗೂ ಒಂಟಿಯಾಗಿರಬಾರದು ಮತ್ತು ನಿಮ್ಮ ಸಂಬಂಧವು ದೀರ್ಘಕಾಲ ಉಳಿಯಬೇಕು ಎಂದು ನೀವು ಬಯಸಿದರೆ ನಿಮ್ಮ ಕೆಲವು ಅಭ್ಯಾಸಗಳನ್ನು ನೀವು ಬದಲಾಯಿಸಿಕೊಳ್ಳಬೇಕಾಗುತ್ತದೆ.
ನಿಮ್ಮ ಸಂಗಾತಿ ನಿಮ್ಮ ಕೆಲವು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ. ಅದು ಜಗಳಕ್ಕೆ ತಲುಪಬಹುದು. ಹಾಗಾಗಿ ನೀವು ಕೆಲವೊಂದು ಅಭ್ಯಾಸಗಳನ್ನು ಬದಲಾಯಿಸಬೇಕಾಗುತ್ತದೆ.
ಸಂಗಾತಿಗೆ ಸ್ಪೇಸ್ ನೀಡಿ
ಹೆಣ್ಣು ಮಕ್ಕಳಿಗೂ ಅವರದ್ದೇ ಆದ ಜೀವನವಿದೆ. ಅವರ ಸ್ನೇಹಿತರು ಅಥವಾ ಸಂಬಂಧಿಕರಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಯಾವಾಗಲೂ ಸ್ಪೇಸ್ ನೀಡಬೇಕು.
ಏಕೆಂದರೆ ಪ್ರೀತಿಯಲ್ಲಿ ಬಿದ್ದ ನಂತರ ಹೆಚ್ಚಿನ ಪುರುಷರು ತಮ್ಮ ಗೆಳತಿಯರು ದಿನವಿಡೀ ತಮ್ಮೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿರಬೇಕು ಅಥವಾ ಚಾಟ್ ಮಾಡುತ್ತಿರಬೇಕೆಂದು ಬಯಸುತ್ತಾರೆ. ಅಂತಹ ಸಂಬಂಧದ ಅವರನ್ನು ಉಸಿರುಗಟ್ಟಿಸುವಂತೆ ಮಾಡುತ್ತದೆ. ಹಾಗಾಗಿ ಅವರು ಅದರಿಂದ ಹೊರಬರಲು ಪ್ರಯತ್ನಿಸುತ್ತಾರೆ.
ಕೋಪಿಸಿಕೊಳ್ಳುವುದು
ಕೆಲವು ಪುರುಷರು ತಮ್ಮ ಸಂಗಾತಿಯ ಮೇಲೆ ಎಲ್ಲೆಂದರಲ್ಲಿ ರೇಗುತ್ತಾರೆ. ಅವರ ಮೇಲೆ ಕೋಪಿಕೊಳ್ಳುತ್ತಾರೆ. ಬೈಯುತ್ತಾರೆ. ಇದನ್ನು ಸಂಗಾತಿ ಇಷ್ಟಪಡುವುದಿಲ್ಲ. ನೀವು ಸಾರ್ವಜನಿಕವಾಗಿ ಅವರನ್ನು ಬೈಯುವಾಗ ಅವರಿಗೂ ನೋವಾಗುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಬಂಧ ಮುರಿಯುವ ಸಾಧ್ಯತೆಯೇ ಹೆಚ್ಚು.
ಸಂಗಾತಿಯನ್ನು ಅನುಮಾನಿಸುವುದು
ಸಂಬಂಧದಲ್ಲಿ ಸಂದೇಹವಿದ್ದರೆ, ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಸಂಗಾತಿ ಸ್ವಲ್ಪ ತಡವಾಗಿ ಬಂದರೆ ಅಥವಾ ಕರೆ ಸ್ವೀಕರಿಸದಿದ್ದಾಗ ಅನುಮಾನ ಪಡುವಂತಹ ಕೆಲವು ಪುರುಷರಿದ್ದಾರೆ, ಮಹಿಳೆಯರೂ ಇದ್ದಾರೆ.
ಹೀಗಿರುವಾಗ ನೀವು ಪ್ರತಿಯೊಂದು ಸಣ್ಣ ಪುಟ್ಟ ವಿಷ್ಯಕ್ಕೂ ಅವರನ್ನು ಅನುಮಾನಿಸುವುದನ್ನು ಅವರು ಇಷ್ಟಪಡೋದಿಲ್ಲ. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ ಇಲ್ಲ ಎಂದು ಭಾವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧವು ಮುರಿದುಹೋಗುತ್ತದೆ.
ಕ್ಷಮಿಸಿ ಎಂದು ಹೇಳುವುದು ಅಪರಾಧವಲ್ಲ
ಸಂಗಾತಿಗಳಲ್ಲಿ ಯಾರೇ ತಪ್ಪು ಮಾಡಿದಾಗ ಕ್ಷಮಿಸಿ ಎಂದು ಹೇಳುವುದು ಅಪರಾಧವಲ್ಲ. ಇದನ್ನು ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ. ನಿಮ್ಮ ಸಂಗಾತಿ ನಿಮ್ಮನ್ನು ಕ್ಷಮಿಸುತ್ತಾರೆ ಮತ್ತು ಹೃದಯದಿಂದ ನಿಮ್ಮನ್ನು ಸ್ವೀಕರಿಸುತ್ತಾರೆ.
ಅದೇ ತಪ್ಪು ಮಾಡೋದು ಮಾಡಿ ಬರೀ ಬಾಯಿ ಮಾತಿಗೆ ಕ್ಷಮೆ ಕೇಳೋದರಿಂದ ಯಾವುದೇ ಪ್ರಯೋಜನವಿಲ್ಲ. ಹುಡುಗಿಯರು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅಂತಹ ಸಂಗಾತಿ ಅಥವಾ ಹುಡುಗನೊಂದಿಗೆ ಸಂಬಂಧವನ್ನು ಮುಂದುವರಿಸಲು ಅವರು ಬಯಸುವುದಿಲ್ಲ.
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
ಬೀಜಗಳಿಂದ ತಯಾರಾದ ಪರಿಸರ ಸ್ನೇಹಿ ತ್ರಿವರ್ಣ ಧ್ವಜ
ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಅಧಿಕಾರಿ ಶ್ರೇಣಿ ಹುದ್ದೆಗಳ ಭರ್ತಿ
ಪ್ಲಾಸ್ಟಿಕ್ ಬಾಟಲ್ ಗಳಿಂದ ಆರೋಗ್ಯಕ್ಕೆ ಮಾರಕ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.