ಮನೆ ರಾಜ್ಯ ಶಿವಾನಂದ ತಗಡೂರು ಅವರಿಗೆ ಡಾ.ಶಿವರಾತ್ರಿ ರಾಜೇಂದ್ರ ಶ್ರೀ ಪ್ರಶಸ್ತಿ

ಶಿವಾನಂದ ತಗಡೂರು ಅವರಿಗೆ ಡಾ.ಶಿವರಾತ್ರಿ ರಾಜೇಂದ್ರ ಶ್ರೀ ಪ್ರಶಸ್ತಿ

0

ಮೈಸೂರು(Mysuru): ಸುತ್ತೂರು ಮಠದ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ 107ನೇ ಜಯಂತಿ ಅಂಗವಾಗಿ ಮೈಸೂರು ಶರಣ ಮಂಡಳಿ ಪ್ರತಿ ವರ್ಷ ನೀಡುವ ರಾಜೇಂದ್ರ ಶ್ರೀಗಳ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಶಿವಾನಂದ ತಗಡೂರು ಭಾಜನರಾಗಿದ್ದಾರೆ.

ಸೆ.17 ರಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.