ಮನೆ ಅಪರಾಧ ರೈಸ್ ಮಿಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ನೂರಾರು ಮೂಟೆ ಪಡಿತರ ವಶ

ರೈಸ್ ಮಿಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ನೂರಾರು ಮೂಟೆ ಪಡಿತರ ವಶ

0

ಮಂಡ್ಯ(Mandya): ನಗರದ ಕಲ್ಲಹಳ್ಳಿಯಲ್ಲಿರುವ ಕಾಳೇಗೌಡ ರೈಸ್‌ಮಿಲ್ ಮೇಲೆ ಆಹಾರ ಇಲಾಖೆ ಜಾಗೃತದಳದ ಅಧಿಕಾರಿಗಳು ದಾಳಿ ನಡೆಸಿ ಪಡಿತರ ಅಕ್ಕಿಯ ನೂರಾರು ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆಹಾರ ಇಲಾಖೆ ಜಾಗೃತ ದಳದ ಜಂಟಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್  ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಖಾಸಗಿ ಕ್ಯಾಂಟರ್, ಗೂಡ್ಸ್ ಆಟೋಗಳಲ್ಲಿ ಮಿಲ್‌ಗೆ ಬಂದಿದ್ದ ಅನ್ನಭಾಗ್ಯ ಅಕ್ಕಿ. ಪಡಿತರ ಅಕ್ಕಿ ಪಾಲಿಶ್ ಮಾಡಿ ಹೊಸ ಬ್ರ್ಯಾಂಡ್ ಮೂಲಕ ಮಾರಾಟ ಮಾಡಲಾಗುತ್ತಿತ್ತು ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.

ಬಡವರ ಅಕ್ಕಿ ತಂದು ಪಾಲಿಶ್ ಮಾಡಿ ಬೇರೆಡೆಗೆ ರೈಸ್ ಮಿಲ್ ಮಾಲೀಕರು ಸಾಗಾಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜ್ಞಾನೇಂದ್ರ ಕುಮಾರ್ ಗಂಗ್ವಾರ್ , ರೈಸ್ ಮಿಲ್ ನಲ್ಲಿ ಪಡಿತರ ಅಕ್ಕಿ ಅಕ್ರಮ ಶೇಖರಣೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಮಹಜರು ನಡೆದ ಬಳಿಕ ಎಷ್ಟು ಪ್ರಮಾಣ ಎಂದು ತಿಳಿಯಲಿದ್ದು, ಪರಿಶೀಲನೆ ಬಳಿಕ ಎಫ್‌ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದರು.