ಮನೆ ಅಪರಾಧ ಎಫ್’ಡಿಐ ಪರೀಕ್ಷೆಯಲ್ಲಿ ಎನ್.ಆರ್.ಸಂಚಾರ ಠಾಣೆ ಪಿಎಸ್’ಐ ಮಧ್ಯವರ್ತಿಯಾಗಿ ಕೆಲಸ: ಎಂ.ಲಕ್ಷ್ಮಣ್  ಆರೋಪ- ಆಡಿಯೋ ಬಿಡುಗಡೆ

ಎಫ್’ಡಿಐ ಪರೀಕ್ಷೆಯಲ್ಲಿ ಎನ್.ಆರ್.ಸಂಚಾರ ಠಾಣೆ ಪಿಎಸ್’ಐ ಮಧ್ಯವರ್ತಿಯಾಗಿ ಕೆಲಸ: ಎಂ.ಲಕ್ಷ್ಮಣ್  ಆರೋಪ- ಆಡಿಯೋ ಬಿಡುಗಡೆ

0

ಮೈಸೂರು(Mysuru): ಎಫ್’ಡಿಐ ಪರೀಕ್ಷೆಯ ಸಂದರ್ಭದಲ್ಲಿ ನಗರದ ಎನ್.ಆರ್.ಸಂಚಾರ ಠಾಣೆ ಪಿಎಸ್ಐ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.

ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅಶ್ವಿನಿ ಅನಂತಪುರ ಅವರು ಈ ಸಂಬಂಧ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದರು. ಎಫ್’ಡಿಐ ಪರೀಕ್ಷೆ ವಿಚಾರವಾಗಿ ಲಂಚದ ಬೇಡಿಕೆ ಇಟ್ಟಿರುವ 30 ನಿಮಿಷಗಳ ಆಡಿಯೋ ಕ್ಲಿಪಿಂಗ್ ಇದಾಗಿದೆ.

ಇದರೊಂದಿಗೆ ಆಕಾಂಕ್ಷಿಯು ವ್ಯಕ್ತಿಯೊಬ್ಬರಿಗೆ 10 ಬಾರಿ ಆರ್’ಟಿಜಿಎಸ್ ಮೂಲಕ ಲಂಚದ ಹಣ ಸಂದಾಯ ಮಾಡಿರುವ ಆದಾಯ ಪ್ರತಿಯನ್ನು ಲಕ್ಷಣ್ ಪ್ರದರ್ಶಿಸಿದರು.

ಪಿಎಸ್​ಐ ನೇಮಕಾತಿ ಹಗರಣ ಪ್ರಕರಣದ ತನಿಖೆಯಲ್ಲಿ ಇವರನ್ನು ತನಿಖೆ ಮಾಡಬೇಕು  ಎಂದು ಒತ್ತಾಯಿಸಿದರು.

ಪಿಎಸ್ಐ ಹುದ್ದೆ ಸೇರಿದಂತೆ ಕೆಎಂಎಫ್, ಬೆಸ್ಕಾಂ, ಚೆಸ್ಕಾಂ, ಕೆಪಿಎಸ್’ಸಿ ಹುದ್ದೆಗಳಿಗೆ ಲಂಚದ ಮೊತ್ತದ ಬಗ್ಗೆ ಚರ್ಚೆ ನಡೆಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

20 ಲಕ್ಷ ಡಿಮ್ಯಾಂಡ್ ಮಾಡಿದ್ದಾರೆ. ಬೆಸ್ಕಾಂ ಹುದ್ದೆಯ ಡೀಲ್ ಬಗ್ಗೆಯೂ ಸಂಭಾಷಣೆಯಲ್ಲಿ ಮಾತನಾಡಿದ್ದಾರೆ. ಸರ್ಕಾರದ ಬೆಂಬಲವಿಲ್ಲದೆ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆಡಿಯೋನಲ್ಲಿ ಯಾರಿಗೆ ದುಡ್ಡು ವರ್ಗಾವಣೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಪಿಎಸ್’ಐ ಹಗರಣದ ಬಗ್ಗೆಯೂ ಮಾತನಾಡಿದ್ದಾರೆ. ಬಿಜೆಪಿ ಮಂತ್ರಿಗಳು ಈ ಹಗರಣದ ಹಿಂದೆ ಇದ್ದಾರೆ. ಬಿಜೆಪಿ ನಾಯಕರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದರು.

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಪರಮಾವಧಿ ತಲುಪಿದೆ. ಕಳೆದ ಮೂರು ವರ್ಷಗಳಿಂದ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಕೋಟ್ಯಾಂತರ ಹಣವನ್ನು ಆಯ್ಕೆಯಾದ ಅಭ್ಯರ್ಥಿಗಳಿಂದ ಸಂಗ್ರಹಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಎಲ್ಲರೂ ಕೂಡ ಲಂಚ ಕೊಟ್ಟು ಬಂದಿದ್ದಾರೆ. ಈಗಾಗಲೇ ಸಚಿವರಾದ 8 ಸಚಿವರು ಪಿಎಸ್ಐ ಹಗರಣದಲ್ಲಿ ಭಾಗಿಯಾಗಿದ್ದು, ಸರ್ಕಾರ ಇದನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದೆ. ಸಚಿವ ಅಶ್ವತ್ಥ ನಾರಾಯಣ ತಲಾ 80 ಲಕ್ಷ ರೂ.ಲಂಚ ಪಡೆದಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆದರೂ ಇದನ್ನು ತನಿಖೆ ನಡೆಸದೇ ಮುಚ್ಚಿ ಹಾಕಿದೆ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಸಿ.ಟಿ.ರವಿಗೆ ಮಾನಮರ್ಯಾದೆ ಇದ್ದರೆ 8 ಮಂತ್ರಿ, 9 ಶಾಸಕರ ಸಿ.ಡಿ.ಬಿಡುಗಡೆ ಸಂಬಂಧ ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲಿ ಎಂದು ಸವಾಲು ಹಾಕಿದರು.