ಮನೆ ಅಪರಾಧ ಚಾಮರಾಜನಗರ ನಗರ: ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆತ

ಚಾಮರಾಜನಗರ ನಗರ: ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆತ

0

ಚಾಮರಾಜನಗರ(Chamarajanagar): ಗಣೇಶನ ಮೂರ್ತಿ ವಿಸರ್ಜನೆ ವೇಳೆ ಡಿಜೆ ಆಫ್ ಮಾಡಿ ಎಂದು ಹೇಳಿದ ಪೊಲೀಸರ ಮೇಲೆ ಕಲ್ಲೆಸೆದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಸಂತೇಮರಹಳ್ಳಿ ವೃತ್ತದ ಸಮೀಪ ಕೂರಿಸಿದ್ದ ಗಣಪತಿಯನ್ನು ಭಾನುವಾರ ವಿಸರ್ಜನೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಭಾನುವಾರ ರಾತ್ರಿ 11 ಗಂಟೆ ಆದರೂ ಡಿಜೆ ಆಫ್ ಮಾಡದೇ ಮೆರವಣಿಗೆಯಲ್ಲಿ ಯುವಕರು ಕುಣಿಯುತ್ತಿದ್ದರಿಂದ ಪೊಲೀಸರು ಡಿಜೆ ಆಫ್ ಮಾಡುವಂತೆ ಸೂಚಿಸಿದ್ದಾರೆ.

ಇದರಿಂದ ಕೋಪಗೊಂಡ ಮಹೇಂದ್ರ, ನಾಗೇಶ, ಮಹೇಶ್, ಮುರುಗೇಶ್ ಸೇರಿದಂತೆ 15ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.‌

ಘಟನೆಯಲ್ಲಿ ಚಾಮರಾಜನನಗರ ಪಟ್ಟಣ ಪೊಲೀಸ್​​ ಠಾಣೆ ಪಿಎಸ್ಐ ಮಹಾದೇವ್ ಅವರಿಗೆ ತೀವ್ರ ಗಾಯವಾಗಿದ್ದರೆ, ಎಎಸ್ಐ ಶಿವಶಂಕರ್, ಚಾಲಕ ಬಸವರಾಜು ಎಂಬುವರ ಕಾಲು, ಕೈಗಳಿಗೆ ಪೆಟ್ಟು ಬಿದ್ದಿದೆ.