ಮನೆ ರಾಜ್ಯ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ: ಜನರಲ್ಲಿ ಆತಂಕ

ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ: ಜನರಲ್ಲಿ ಆತಂಕ

0

ಮೈಸೂರು(Mysuru): ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದಿರುವ ಒಂಟಿ ಸಲಗದಿಂದಾಗಿ ಜನರಲ್ಲಿ ಆತಂಕ ಮನೆಮಾಡಿದೆ.

ನಾಗರಹೊಳೆ ಅಭಯಾರಣ್ಯದಿಂದ ಆಹಾರ ಅರಸಿ ಕಳೆದ ರಾತ್ರಿ ನಾಡಿಗೆ ಬಂದ ಒಂಟಿ ಸಲಗ, ಇಂದು ಬೆಳಗ್ಗೆ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮಕ್ಕೆ ನುಗ್ಗಿದೆ.

ಆನೆಯನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ಕಲ್ಲನ್ನು ಎಸೆಯುವ ಮೂಲಕ ಓಡಿಸಲು ಪ್ರಯತ್ನಿಸಿದರು. ಇದರಿಂದ ರೊಚ್ಚಿಗೆದ್ದ ಸಲಗ ಗ್ರಾಮದ ಮನೆಯೊಂದನ್ನು ಹಾಗೂ ಎತ್ತಿನ ಗಾಡಿಯನ್ನು ಪುಡಿಗಟ್ಟಿದೆ.

ಇನ್ನೂ ಆನೆ ಗ್ರಾಮದಲ್ಲೇ ಓಡಾಡುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗಟ್ಟುವ ಪ್ರಯತ್ನ ಮಾಡಲಾಗುತ್ತಿದೆ.