ಈಗಂತೂ ಎಲ್ಲರೂ ಆಫೀಸ್’ಗೆ ಕೆಲಸ ಮಾಡುವವರೇ ಆಗಿದ್ದಾರೆ. ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮೊಟಕುಗೊಳಿಸಿ ಕಚೇರಿಗಳಿಗೆ ಕರೆಸಿಕೊಳ್ಳುತ್ತಿದೆ. ಹೀಗಾಗಿ ಇಡೀ ದಿನ ಕುರ್ಚಿಯ ಮೇಲೆ ಕುಳಿತು ಲ್ಯಾಪ್ ಟಾಪ್ ಮೊಬೈಲ್ ನೋಡುವುದೆ ಆಗಿದೆ.
ಸರಿಸುಮಾರು 8 ರಿಂದ 9 ಗಂಟೆಗಳ ಕಾಲ ಹೆಚ್ಚಿನ ಉದ್ಯೋಗಸ್ಥರು ಕುಳಿತುಕೊಂಡು ಕೆಲಸ ಮಾಡುತ್ತಾರೆ. ಮಧ್ಯದಲ್ಲಿ ಎಷ್ಟು ಎದ್ದು ಓಡಾಡಿದರೂ ಅದು ಸಾಕಾಗುವುದಿಲ್ಲ. ಈ ರೀತಿ ಇಡೀ ದಿನ ಉಳಿತು ಕೆಲಸ ಮಾಡುವ ಪರಿಣಾಮ ಭುಜದಲ್ಲಿ ಉರಿಯ ನೋವು, ಬೆನ್ನು ನೋವು, ಮನಸ್ಸಿಗೆ ಜಡದ ಅನುಭವ, ಕಣ್ಣಿಗೆ ಸುಸ್ತಾಗಿ ನಿದ್ದೆ ಬರುವುದು ಕಾಣಿಸಿಕೊಳ್ಳುತ್ತದೆ.
ಇದರಿಂದ ಹೊರಬಂದು ದೇಹವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ನಿಮಗೆ ಯೋಗಾಸನ ಬೆಸ್ಟ್ ಮಾರ್ಗವಾಗಿದೆ. ಪ್ರತಿದಿನ ಬೆಳಗ್ಗೆ ಯೋಗಾಸನ ಮಾಡುವುದರಿಂದ ಮೂಳೆ, ಸ್ನಾಯುಗಳನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಅಲ್ಲದೆ ರಾತ್ರಿ ಯೋಗಾಸನ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು ನಿದ್ದೆ ಉತ್ತಮವಾಗಿ ಬರುತ್ತದೆ. ಈ ಎಲ್ಲಾ ಆಸನಗಳು ನಿಮ್ಮ ಇಡೀ ದಿನದ ಸುಸ್ತನ್ನು ಹೋಗಲಾಡಿಸುತ್ತದೆ.
ವಿಪರೀತ ಕರಣಿ
ಇಡೀ ದಿನ ಕುಳಿತು ಬೆನ್ನಿಗೆ ಆಯಾಸವಾಗಿರುತ್ತದೆ. ಇದನ್ನು ಸರಿಪಡಿಸಲು ವಿಪರೀತ ಕರಣಿ ಆಸನ ಹೆಚ್ಚು ಉಪಯುಕ್ತವಾಗಿದೆ. ಇದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿ ನೀಡುತ್ತದೆ, ಇದು ದೀರ್ಘಕಾಲ ಕುಳಿತಿರುವ ನಂತರ ನಿಮ್ಮ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ.
ಮಾಡುವ ವಿಧಾನ
• ಗೋಡೆಯ ಬಳಿ ನೇರವಾಗಿ ಮಲಗಿಕೊಂಡು ಕಾಲುಗಳನ್ನು ಗೋಡೆಗೆ ವಾಲಿಸಿಕೊಳ್ಳಿ. ನಿಮ್ಮ ಸೊಂಟ ಗೋಡೆಗೆ ಹತ್ತಿರವಾಗಿರಲಿ.
• ನಿಮ್ಮ ಮಂಡಿರಜ್ಜುಗಳ ಮೇಲೆ ಹೆಚ್ಚು ಒತ್ತಡವನ್ನು ಹೊಂದಿದ್ದರೆ, ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಿ ಮತ್ತು ಗೋಡೆಯಿಂದ ಸ್ವಲ್ಪ ಮುಂದೆ ಸ್ಕೂಟ್ ಮಾಡಿ. ನಿಮ್ಮ ಎದೆಯು ವಿಶಾಲ ಮತ್ತು ವಿಸ್ತಾರವನ್ನು ಅನುಭವಿಸಬೇಕು ಮತ್ತು ಸುಲಭವಾದ ಉಸಿರಾಟಕ್ಕೆ ದಾರಿ ಮಾಡಿಕೊಡಬೇಕು.
• ನಿಮ್ಮ ಕೆಳಗಿರುವ ಸ್ಥಿರವಾದ ನೆಲದ ಭಾವನೆಯನ್ನು ತೆಗೆದುಕೊಳ್ಳಿ. ನಿಮ್ಮ ಭುಜಗಳು, ನಿಮ್ಮ ಬೆನ್ನು ಮತ್ತು ನಿಮ್ಮ ಕಾಲುಗಳಿಗೆ ಆರಾಮ ನೀಡಿ ಉಸಿರಾಡಿ. 3 ರಿಂದ 5 ನಿಮಿಷಗಳ ಕಾಲ ಇಲ್ಲಿ ವಿಶ್ರಾಂತಿ ಪಡೆಯಿರಿ.
ಪಶ್ಚಿಮೋತ್ಥಾನಾಸನ
ಈ ಭಂಗಿಯಲ್ಲಿ ಬೆನ್ನನ್ನು ಬಾಗಿಸುವುದರಿಂದ ನರಗಳಿಗೆ ಆರಾಮದಾಯಕ ಅನುಭವ ಸಿಗುತ್ತದೆ. ಇದರಿಂದ ಇಡೀ ದಿನದ ಸುಸ್ತು ನಿವಾರಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಆದರೆ ನೆನಪಿಡಿ ರಾತ್ರಿ ಯೋಗಾಸನ ಮಾಡುವಾಗ ಊಟದ ನಂತರ 2 ಗಂಟೆಗಳ ನಂತರ ಅಭ್ಯಾಸ ಮಾಡಿ.
ಮಾಡುವ ವಿಧಾನ
• ಮೊದಲು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ದಂಡಾಸನದಲ್ಲಿ ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಿ.
• ನಂತರ ಎರಡೂ ಕೈಗಳನ್ನು ತೊಡೆಯ ಮೇಲಿರಿಸಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆ ಎತ್ತಿ.
• ಬಳಿಕ ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ ಕೈ ಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ. ನೆನಪಿಡಿ, ಮೊಣಕಾಲು ನೇರವಾಗಿರಲಿ.
• ಇದೇ ಸ್ಥಿತಿಯಲ್ಲಿ ನಾಲ್ಕೈದು ಬಾರಿ ಉಸಿರಾಟ ಮಾಡಿ, ನಂತರ ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಮೇಲಕ್ಕೆ ಬನ್ನಿ.
• ನಂತರ ಉಸಿರನ್ನು ಹೊರಹಾಕುತ್ತಾ ನಿಧಾನವಾಗಿ ಕೈಗಳನ್ನು ಕೆಳಗೆ ಇಳಿಸಿ, ವಿಶ್ರಾಂತಿ ತೆಗೆದುಕೊಳ್ಳಿ.
ಉಷ್ಟ್ರಾಸನ
ಈ ಭಂಗಿಯು ದಿನವಿಡೀ ಕುರ್ಚಿಯಲ್ಲಿ ಕುಳಿತು ಉಂಟಾಗುವ ಆಯಾಸವನ್ನು ನಿವಾರಿಸಿ ಇಡೀ ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ಒಂಟೆ ಭಂಗಿ ಎಂದು ಕರೆಯುವ ಈ ಆಸನ ನಮ್ಮಲ್ಲಿ ಅನೇಕರಿಗೆ ಸವಾಲಿನ ಸಂಗತಿಯಾಗಿದೆ. ಬ್ಯಾಕ್ಬೆಂಡ್ಗಳು ಸಹಾನುಭೂತಿಯ ನರಮಂಡಲವನ್ನು ಪ್ರಚೋದಿಸುತ್ತವೆ, ಅಲ್ಲದೆ ಇದು ತುಸು ಕಠಿಣ ಆಸನವಾಗಿದೆ.
ಹೀಗಾಗಿ ಉಸಿರಾಟ ಸರಿಯಾಗಿರಬೇಕು. ಆದ್ದರಿಂದ ಈ ಆಸನವನ್ನು ಮಾಡುವಾಗ ಯೋಗ ತರಬೇತುದಾರರ ಸಹಾಯ ಪಡೆದುಕೊಳ್ಳಿ.
ಮಾಡುವ ವಿಧಾನ
• ಮೊದಲು ನಿಮ್ಮ ಮೊಣಕಾಲಿನ ಮೇಲೆ ನಿಂತುಕೊಳ್ಳಿ ನಂತರ ನಿಧಾನವಾಗಿ ಹಿಂದಕ್ಕೆ ಬಾಗಿ ಹಿಮ್ಮಡಿಯನ್ನು ಕೈಗಳಿಂದ ಹಿಡಿದುಕೊಳ್ಳಿ. ಕಾಲು ನೇರವಾಗಿರಲಿ, ಕುತ್ತಿಗೆ ಸಂಪೂರ್ಣವಾಗಿ ಹಿಂದಕ್ಕೆ ಬಾಗಿರಲಿ.
• ಉಸಿರಾಟದ ಮೇಲೆ ಗಮನವಿರಲಿ. ಈ ಆಸನವನ್ನು ಯೋಗ ತರಬೇತುದಾರರ ಬಳಿ ತರಬೇತಿ ಪಡೆದ ಬಳಿಕವಷ್ಟೇ ಅಭ್ಯಾಸ ಮಾಡಿ, ಇಲ್ಲವಾದರೆ ಬೆನ್ನಿನ ಮೂಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ವೀರಭದ್ರಾಸನ
ಈ ಆಸನವು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸಲು ಸಹಾಯಕವಾಗಿದೆ. ವಾರಿಯರ್ ಪೋಸ್ ಎಂದು ಕರೆಯುವ ಈ ಆಸನ ಕಾಲು ಮತ್ತು ತೋಳುಗಳಿಗೆ ಆರಾಮ ನೀಡುತ್ತದೆ. ಹೀಗಾಗಿ ನೀವು ಇಡೀ ದಿನ ಕುಳಿತುಕೊಂಡ ಆಯಾಸ ನಿವಾರಿಸಿ ವಿಶ್ರಾಂತಿ ಅನುಭವವನ್ನು ನೀಡುತ್ತದೆ.
ಮಾಡುವ ವಿಧಾನ
• ಯೋಗ ಮ್ಯಾಟ್ ಮೇಲೆ ಮೊದಲು ನೇರವಾಗಿ ನಿಂತುಕೊಳ್ಳಿ. ನಿಮ್ಮ ಕೈಗಳನ್ನು ನೇರವಾಗಿ ಚಾಚಿ ಮತ್ತು ನಿಮ್ಮ ಅಂಗೈಗಳನ್ನು ನೆಲದ ಕಡೆಗೆ ತಿರುಗಿಸಿ. ನಂತರ ಒಂದು ಕಾಲನ್ನು ಮುಂದಕ್ಕೆ ಚಾಚಿ, ಮೊಣಕಾಲನ್ನು ಕೊಂಚ ಬಗ್ಗಿಸಿ. ನಂತರ ನಿಮ್ಮ ಕೈಗಳು ನೇರವಾಗಿರಿಲಿ.
• ಬಗ್ಗಿದ ಮೊಣಕಾಲು ಇರುವ ಕಡೆ ನಿಮ್ಮ ಮುಖವಿರಲಿ. ದೃಷ್ಟಿ ನೇರವಾಗಿರಲಿ ಹಾಗೂ ನಿಧಾನವಾಗಿ ಉಸಿರಾಟ ನಡೆಸಿ. ನಂತರ ಸಹಜ ಸ್ಥಿತಿಗೆ ಬನ್ನಿ.
ಅಧೋಮುಖಶ್ವಾನಾಸನ
ಈ ಭಂಗಿಯಲ್ಲಿ ದೇಹ ಸಂಪೂರ್ಣವಾಗಿ ಕೆಳಮುಖವಾಗಿರುವ ಕಾರಣ ದೇಹದ ಮೇಲ್ಭಾಗದ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಈ ಯೋಗಾಸನದ ತಲೆಕೆಳಗಾದ ಸ್ವಭಾವವು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ, ನೀವು ದಿನವಿಡೀ ಕುಳಿತುಕೊಂಡ ನಂತರ ಇದು ಅತ್ಯಗತ್ಯವಾಗಿರುತ್ತದೆ.
ಮಾಡುವ ವಿಧಾನ
• ಮೊದಲು ಹೊಟ್ಟೆಯ ಮೇಲೆ ಮಲಗಿಕೊಳ್ಳಿ. ನಂತರ ನಿಧಾನವಾಗಿ ಕೈಗಳನ್ನು ನೆಲಕ್ಕೆ ಇರಿಸಿ ನಿಂತುಕೊಳ್ಳಿ. ಇದು ಈಗ ನೀವು ಎರಡು ಕೈ ಮತ್ತು ಎರಡು ಕಾಲಗಳ ಮೇಲೆ ನಿಂತಂತೆ ಆಗುತ್ತದೆ.
• ತಲೆ ಕೆಳಕ್ಕೆ ಬಾಗಿರಲಿ. ಕಾಲುಗಳ ಬೆರಳು ಅಗಲಗೊಳಿಸಿ. ಇದು ನಿಮಗೆ ಆರಾಮದಾಯಕ ಅನುಭವ ನೀಡುತ್ತದೆ. ಅಲ್ಲದೆ ಇಡೀ ದಿನ ಕುಳಿತು ಕೆಲಸ ಮಾಡಿದ ಸುಸ್ತು ಕಡಿಮೆಯಾಗುತ್ತದೆ. ನಂತರ ನಿಧಾನವಾಗಿ ಬಾಲಾಸನಕ್ಕೆ ಹಿಂತಿರುಗಿ ವಿಶ್ರಾಸಂತಿ ಪಡೆಯಿರಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.