ಮನೆ ರಾಜ್ಯ ಗಜಪಡೆಗೆ ಬೀಳ್ಕೊಡುಗೆ: ಕಾವಾಡಿಗಳು, ಮಾವುತರಿಗೆ ಗೌರವ ಧನ ವಿತರಿಸಿ, ಸನ್ಮಾನ

ಗಜಪಡೆಗೆ ಬೀಳ್ಕೊಡುಗೆ: ಕಾವಾಡಿಗಳು, ಮಾವುತರಿಗೆ ಗೌರವ ಧನ ವಿತರಿಸಿ, ಸನ್ಮಾನ

0

ಮೈಸೂರು(Mysuru): ದಸರಾ ಜಂಬೂ ಸವಾರಿ ಯಶಸ್ವಿಗೆ ಕಾರಣರಾದ ಗಜಪಡೆಯ ಕಾವಾಡಿಗಳು ಮತ್ತು ಮಾವುತರಿಗೆ ಅರಮನೆ ಆಡಳಿತ ಮಂಡಳಿ ವತಿಯಿಂದ ಗೌರವ ಧನ ನೀಡಿ ಸನ್ಮಾನಿಸಲಾಯಿತು.

ಇಂದು ಗಜಪಡೆ ಮತ್ತು ಕಾವಾಡಿಗರು ಮತ್ತು ಮಾವುತರ ಕುಟುಂಬ ವಾಸಸ್ಥಳಕ್ಕೆ ಹಿಂದಿರುಗುತ್ತಿದ್ದು,   ಮಾವುತ ಮತ್ತು ಕಾವಾಡಿಗಳಿಗೆ ತಲಾ 10 ಸಾವಿರ ನೀಡಿ  ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭ ಡಿಸಿಎಫ್ ಕರಿಕಾಳನ್ ಮಾತನಾಡಿ, ಯಶಸ್ವಿ ದಸರಾ ಆಚರಣೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು. 

ಶ್ರೀ ಚಾಮುಂಡಿ ತಾಯಿಯ ಆಶೀರ್ವಾದದಿಂದ ಈ ಬಾರಿ ಅದ್ದೂರಿ ದಸರಾ ನಡೆಯಿತು. ನಾನು ಆರೇಳು ವರ್ಷಗಳಿಂದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಈ ಬಾರಿಯ ದಸರಾ ಮಹೋತ್ಸವದ ಜಂಬೂಸವಾರಿಗೆ ಭಾರಿ ಜನಸ್ತೋಮ ಸೇರಿತ್ತು. ಅದ್ದೂರಿಯಾಗಿ ದಸರಾ ಜಂಬೂಸವಾರಿ ಜರುಗಿತು. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು ಎಂದರು.

ಕಾಡಿಗೆ ಹೋಗಲು ಒಪ್ಪದ ಭೀಮ, ಶ್ರೀರಾಮ ಆನೆ.

ದಸರಾ ಗಜಪಡೆಗೆ ಇಂದು ಬೀಳ್ಕೊಟ್ಟ ಬಳಿಕ ಆನೆಗಳನ್ನು ಲಾರಿಗೆ ಏರಿಸಲು ಮುಂದಾದ ವೇಳೆ ಲಾರಿ ಏರಲು ಭೀಮ ಮತ್ತು ಶ್ರೀರಾಮ ಆನೆ ಹಿಂದೇಟು ಹಾಕಿದ ಘಟನೆ ನಡೆಯಿತು. ಕಳೆದ ಎರಡು ತಿಂಗಳಿಂದ ನಾಡಿನಲ್ಲೇ ಇದ್ದು  ಈಗ ಕಾಡಿಗೆ ಹೋಗಲು ಭೀಮ ಮತ್ತು ಶ್ರೀರಾಮ ಆನೆಗಳು ಹಿಂದೇಟು ಹಾಕಿದವು. ಈ ವೇಳೆ ಲಾರಿಗೆ ಏರಿಸಲು ಮಾವುತರು ಹರಸಾಹಸಪಟ್ಟರು.

ಅಭಿಮನ್ಯುವಿನ ಮೂಲಕ ನೂಕಿಸಿದರೂ ಶ್ರೀರಾಮ ಆನೆ ಲಾರಿ ಏರದೇ ನಿಂತಲ್ಲೇ ಮಲಗಿತು. ಶ್ರೀರಾಮ ಆನೆ ಹೊಡೆದು ಬಡಿದರೂ ಲಾರಿ ಏರಲಿಲ್ಲ. ಕೊನೆಗೂ ಲಾರಿ ಏರದೆ ವಾಪಸ್ಸಾಯಿತು.  ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಒಟ್ಟು 12 ಆನೆಗಳು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ಇಂದು ತವರಿಗೆ ಪಯಣ ಬೆಳೆಸಿವೆ.