ಮನೆ ಅಪರಾಧ ಗಣಪತಿ ವಿಸರ್ಜನೆ ವೇಳೆ ಯುವಕರ ಸಾವು: ತಮ್ಮನ ಮೃತದೇಹ  ನೋಡಿ ಸಹೋದರನಿಗೆ ಹೃದಯಾಘಾತ

ಗಣಪತಿ ವಿಸರ್ಜನೆ ವೇಳೆ ಯುವಕರ ಸಾವು: ತಮ್ಮನ ಮೃತದೇಹ  ನೋಡಿ ಸಹೋದರನಿಗೆ ಹೃದಯಾಘಾತ

0

ಹಾಸನ(Hassan): ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ ಬಾಗೀವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಈ‌ ಮಧ್ಯೆ ತಮ್ಮನ ಮೃತದೇಹ ನೋಡಿ, ಸಹೋದರ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ (28), ಆಟೋ ಚಾಲಕನಾಗಿದ್ದ ರಾಜ. (30) ಮೃತಪಟ್ಟ ಯುವಕರು.ಗುರುವಾರ ರಾತ್ರಿ ಗಣಪತಿ ವಿಸರ್ಜನೆ ವೇಳೆ‌ ಕೆರೆಗೆ ಇಳಿದಿದ್ದ ಇಬ್ಬರು, ಈಜು ಬಾರದ್ದರಿಂದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತಪಟ್ಟ ರಾಜ ಅವರ ಅಣ್ಣ ಮಧು (37) ಬೆಂಗಳೂರಿನಿಂದ ಬಂದಿದ್ದು, ತಮ್ಮನ ಶವ ನೋಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ‌.

 ಮೃತದೇಹಗಳನ್ನು ನಗರದ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸ್ಥಳಕ್ಕೆ ಗಂಡಸಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ದೂರು ದಾಖಲಿಸಿದ್ದಾರೆ.