ಮನೆ ರಾಜ್ಯ ಸಂಧಾನ ಸಭೆ ಯಶಸ್ವಿ: ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ವಾರದೊಳಗೆ ವೇತನ

ಸಂಧಾನ ಸಭೆ ಯಶಸ್ವಿ: ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ವಾರದೊಳಗೆ ವೇತನ

0

ಬೆಂಗಳೂರು(Bengaluru):  ಕಳೆದ ಎರಡು ತಿಂಗಳಿನಿಂದ ವೇತನ ನೀಡದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆಯ ಆಯುಕ್ತರು ಮತ್ತು 108 ಆಂಬುಲೆನ್ಸ್ ಸಿಬ್ಬಂದಿ ಹಾಗೂ ಡಿವಿಕೆ ನಡುವೆ ಸಂಧಾನ ಸಭೆ ನಡೆದಿದೆ.

ಸಭೆಯ ತೀರ್ಮಾನದಂತೆ ಒಂದು ವಾರದೊಳಗೆ ವೇತನ ನೀಡುವುದಾಗಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅಂಬುಲೆನ್ಸ್ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಲು ಮುಂದಾಗಿದ್ದಾರೆ.