ಈ ಬಾರಿಯ ದೀಪಾವಳಿಯು ಅ. 23 ರಿಂದ ಧನತ್ರಯೋದಶಿಯೊಂದಿಗೆ ಆರಂಭವಾಗಲಿದೆ. ಹೆಚ್ಚಿನ ಮನೆಗಳಲ್ಲಿ ಮನೆಯನ್ನು ಅಲಂಕರಿಸುವ ಕೆಲಸ ಪ್ರಾರಂಭವಾಗಿದೆ. ಕೆಲವೆಡೆ ಜನರು ಮನೆಗೆ ಬಣ್ಣ ಬಳಿಯುತ್ತಿದ್ದರೆ, ಕೆಲವರು ಮನೆ ಎಲ್ಲಾ ಕ್ಲೀನ್ ಮಾಡುವ ತರಾರತುರಿಯಲ್ಲಿದ್ದಾರೆ.
ಮನೆಯನ್ನು ಅಲಂಕರಿಸುವಲ್ಲಿ ವಾಸ್ತು ನಿಯಮಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ದೀಪಾವಳಿಯಂದು ವಾಸ್ತುವಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮನೆಯನ್ನು ಸಿದ್ಧಪಡಿಸಿದರೆ, ಲಕ್ಷ್ಮಿದೇವಿಯು ಮನೆಗೆ ಪ್ರವೇಶಿಸುತ್ತಾಳೆ ಮತ್ತು ಅವಳ ಅನುಗ್ರಹದಿಂದ ಸಂಪತ್ತು ಮತ್ತು ಸಂತೋಷವು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
ದೀಪಾವಳಿಯಂದು ಮುಖ್ಯ ದ್ವಾರವನ್ನು ಹೀಗೆ ಸಿಂಗರಿಸಿ
ದೀಪಾವಳಿಯಂದು ಶುಚಿಗೊಳಿಸುವ ಸಮಯದಲ್ಲಿ, ಮುಖ್ಯ ಬಾಗಿಲನ್ನು ಸರಿಯಾಗಿ ಸ್ವಚ್ಛಗೊಳಿಸಿ. ಮುಖ್ಯ ಬಾಗಿಲಲ್ಲಿ ಬಾಗಿಲು ಸದ್ದು ಮಾಡಿದರೆ ಅದನ್ನು ಸರಿಪಡಿಸಿ. ಬಾಗಿಲಿನಿಂದ ಬರುವ ಯಾವುದೇ ರೀತಿಯ ಶಬ್ದವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮುಖ್ಯ ದ್ವಾರದ ಮೇಲೆ ಬೆಳ್ಳಿಯ ಸ್ವಸ್ತಿಕ ಮತ್ತು ಪ್ರವೇಶದ್ವಾರದಲ್ಲಿ ಲಕ್ಷ್ಮಿಯ ಹೆಜ್ಜೆಯ ಗುರುತು ಹಾಕಿ. ಬಾಗಿಲನ್ನು ಅಲಂಕರಿಸಲು, ಮಾವಿನ ಎಲೆಗಳಿಂದ ಮಾಡಿದ ತೋರಣವನ್ನು ಹಾಕಿ. ಹೀಗೆ ಮಾಡುವುದರಿಂದ ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ.
ಈಶಾನ್ಯ ದಿಕ್ಕು ಸ್ವಚ್ಛವಾಗಿರಲಿ
ದೀಪಾವಳಿಯ ಮೊದಲು ಈಶಾನ್ಯ ಮೂಲೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ. ಈಶಾನ್ಯವು ದೇವರ ಸ್ಥಳವಾಗಿದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಈ ಸ್ಥಳವು ಸ್ವಚ್ಛ ಮತ್ತು ಖಾಲಿಯಾಗಿರುವುದು ಬಹಳ ಮುಖ್ಯ. ಈಶಾನ್ಯದಲ್ಲಿ ಯಾವುದೇ ಅನಗತ್ಯ ವಸ್ತುಗಳನ್ನು ಇಡಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ ಮತ್ತು ಆಶೀರ್ವಾದ ನೀಡದೆಯೇ ನಿಮ್ಮ ಮನೆಯಿಂದ ಹಿಂತಿರುಗುತ್ತಾಳೆ.
ಬ್ರಹ್ಮಸ್ಥಾನ
ಈಶಾನ್ಯದ ನಂತರ, ಮನೆಯ ಪ್ರಮುಖ ಭಾಗವೆಂದರೆ ಬ್ರಹ್ಮ ಸ್ಥಾನ. ಬ್ರಹ್ಮ ಸ್ಥಾನವು ಪ್ರತಿ ಮನೆಯ ಮಧ್ಯದ ಒಂದು ಭಾಗವಾಗಿದೆ. ಈ ಸ್ಥಳವು ತೆರೆದ, ಸ್ವಚ್ಛ ಮತ್ತು ಖಾಲಿಯಾಗಿರುವುದು ಅತ್ಯಂತ ಮುಖ್ಯವಾಗಿದೆ. ಈ ಸ್ಥಳವನ್ನು ಸರಿಯಾಗಿ ಸ್ವಚ್ಛಗೊಳಿಸಿ ಮತ್ತು ಇಲ್ಲಿ ಯಾವುದೇ ಭಾರವಾದ ಪೀಠೋಪಕರಣಗಳನ್ನು ಇರಿಸಿದ್ದರೆ ಅದನ್ನು ತೆಗೆದುಹಾಕಿ ಮತ್ತು ಯಾವುದೇ ಬಳಕೆಯಾಗದ ವಸ್ತುಗಳನ್ನು ಇಲ್ಲಿ ಇಡಬೇಡಿ.
ದೀಪಾವಳಿಯ ಮೊದಲು ಈ ವಸ್ತುಗಳನ್ನು ತೆಗೆದುಹಾಕಿ
ದೀಪಾವಳಿಯ ಮೊದಲು, ಮನೆಯಲ್ಲಿ ದೀರ್ಘಕಾಲ ಬಳಸದೆ ಇರುವ ವಸ್ತುಗಳನ್ನು ಮನೆಯಿಂದ ತೆಗೆದುಹಾಕಿ. ಒಣಗಿದ ಹೂವುಗಳು, ಹಳೆಯ ಜಂಕ್ ವಸ್ತುಗಳು, ಹಳೆಯ ಪತ್ರಿಕೆ, ಒಡೆದ ಗಾಜು ಮತ್ತು ಧರಿಸದೇ ಇರುವ ಬೂಟುಗಳನ್ನು ದೀಪಾವಳಿಯ ಮೊದಲು ಮನೆಯಿಂದ ತೆಗೆದುಹಾಕಬೇಕು. ಹಳೆಯ ಬಳಸದೇ ಇರುವ ವಸ್ತುಗಳಿಂದ ಕೆಲವು ರೀತಿಯ ಋಣಾತ್ಮಕ ಶಕ್ತಿಯು ಉತ್ಪತ್ತಿಯಾಗುತ್ತದೆ ಮತ್ತು ಅವು ಹಣದ ಬರುವಿಕೆಗೆ ಅಡೆತಡೆಗಳನ್ನು ಸೃಷ್ಟಿಸುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ದೀಪಾವಳಿ ಶುಚಿಗೊಳಿಸುವ ಸಮಯದಲ್ಲಿ ಅವುಗಳನ್ನು ತೆಗೆದುಹಾಕಿ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.