ಅಜೀರ್ಣ ಸಮಸ್ಯೆಯು ಇಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಲಿದ್ದು, ಇದರಿಂದಾಗಿಯೇ ಹಲವಾರು ಅನಾರೋಗ್ಯಗಳು ಮುಂದೆ ಬರಬಹುದು. ಜೀವನಶೈಲಿ, ಆಹಾರ ಕ್ರಮ ಇತ್ಯಾದಿಗಳು ಕೂಡ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
ರಾತ್ರಿ ಊಟವಾದ ಬಳಿಕ ಹೆಚ್ಚಿನವರು ಬೇಗನೆ ನಿದ್ರೆಗೆ ಜಾರು ಪರಿಣಾಮವಾಗಿ ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವುದು ಹಾಗೂ ಇದು ಹೊಟ್ಟೆಯ ಆರೋಗ್ಯಕ್ಕೂ ಒಳ್ಳೆಯದಲ್ಲ. ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡಲು ಕೆಲವೊಂದು ಯೋಗಾಸನಗಳನ್ನು ಪ್ರಯತ್ನಿಸಬೇಕು.
ಇದು ಊಟವಾದ ಬಳಿಕವೂ ಮಾಡಬಹುದಾದ ಆಸನಗಳಾಗಿದ್ದು, ಇವುಗಳನ್ನು ಅಭ್ಯಸಿಸಿದರೆ, ಆಗ ಖಂಡಿತವಾಗಿಯೂ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು. ಇವುಗಳಲ್ಲಿ ಮುಖ್ಯವಾಗಿ ಸುಖಾಸನ ಮತ್ತು ವಜ್ರಾಸನವನ್ನು ಬಳಸಿಕೊಂಡು ಜೀರ್ಣಕ್ರಿಯೆ ಸರಾಗ ಮಾಡಬಹುದು. ಊಟವಾದ ಬಳಿಕ ನೀವು ಮಾಡಬಹುದಾದ ಈ ಆಸನಗಳ ಬಗ್ಗೆ ತಿಳಿಯಿರಿ.
ವಜ್ರಾಸನ
ಮಾಡುವ ವಿಧಾನ
• ನೇರವಾಗಿ ನಿಂತುಕೊಳ್ಳಿ ಮತ್ತು ಕೈಗಳು ನಿಮ್ಮ ದೇಹದ ಬದಿಯಲ್ಲಿ ಇರಲಿ.
• ನಿಧಾನವಾಗಿ ಮುಂದಕ್ಕೆ ಬಗ್ಗಿ ಮತ್ತು ಮೊಣಕಾಲನ್ನು ನೆಲದ ಮೇಲೂರಿ.
• ಹಿಂಗಾಲಿನ ಮೇಲೆ ಹಾಗೆ ಪೃಷ್ಠವನ್ನು ಇಡಬೇಕು.
• ತೊಡೆಗಳು ಹಾಗೆ ಬಿಗಿಯಾಗಿ ಇರಬೇಕು.
• ಹಿಂಗಾಲುಗಳು ಕೂಡ ಬಿಗಿಯಾಗಿ ಇರಬೇಕು.
• ಪಾದಗಳನ್ನು ಒಂದರ ಮೇಲೆ ಇನ್ನೊಂದನ್ನು ಇಡಬಾರದು. ಒದರ ಬದಿಯಲ್ಲಿ ಒಂದು ಇರಬೇಕು.
• ಅಂಗೈಯನ್ನು ಮೊಣಕಾಲಿನಲ್ಲಿ ಮೇಲ್ಮುಖವಾಗಿ ಇಡಬೇಕು.
• ಬೆನ್ನು ನೇರವಾಗಿಸಿಕೊಂಡು ಮುಂದೆ ನೋಡಿ.
• ಈ ಆಸನದಲ್ಲಿ ಸ್ವಲ್ಪ ಸಮಯ ಇರಬೇಕು.
• ಮೊಣಕಾಲು ಅಥವಾ ಪಾದದ ನೋವಿನ ಸಮಸ್ಯೆಯಿದ್ದರೆ, ಆಗ ಇದನ್ನು ಮಾಡಬೇಡಿ.
ಸುಖಾಸನ
ಮಾಡುವ ವಿಧಾನ
• ಕಾಲುಗಳನ್ನು ಹಾಗೆ ನೇರವಾಗಿ ಮುಂದಕ್ಕೆ ಚಾಚಿಕೊಂಡು ಕುಳಿತುಕೊಳ್ಳಿ.
• ಬಲದ ಕಾಲನ್ನು ಮಡಚಿ ಮತ್ತು ಬಲದ ಮೊಣಕಾಲನ್ನು ಬಲದ ಬದಿಯಲ್ಲಿ ಇಡಿ.
• ಇನ್ನೊಂದು ಕಾಲನ್ನು ಕೂಡ ಮಡಚಿ ಮತ್ತು ಕುರು ಸ್ನಾಯುಗಳ ಭಾಗದಲ್ಲಿ ಇದನ್ನು ಮಡಚಿ.
• ಬೆನ್ನು ನೇರವಾಗಿ ಇರಲಿ.
• ಮೊಣಕಾಲಿನ ಮೇಲೆ ಅಂಗೈಯನ್ನು ಇಡಿ.
• ಎಡದ ಕಾಲಿನಿಂದಲೂ ಹೀಗೆ ಮಾಡಿ.
ಊಟವಾದ ತಕ್ಷಣ ಮಲಗಬೇಡಿ…
• ಊಟವಾದ ತಕ್ಷಣವೇ ಮಲಗುವುದರಿಂದ ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ಜಠರಕರುಳಿನ ಸಮಸ್ಯೆಗಳೂ ಬರುವುದು. ವಜ್ರಾಸನದಿಂದ ಜೀರ್ಣಕ್ರಿಯೆ ಉತ್ತಮವಾಗುವುದು ಮತ್ತು ಯಕೃತ್ ನ ಕಾರ್ಯಗಳು ಉತ್ತಮವಾಗುವುದು.
• ವಜ್ರಾಸನವು ತುಂಬಾ ಸರಳ ಆಸನವಾಗಿದ್ದು, ಇದು ಸೊಂಟದ ಭಾಗದಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸುವುದು ಹಾಗೂ ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು.
• ವಜ್ರಾಸನ ಮತ್ತು ಸುಖಾಸನವನ್ನು ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಊಟದ ಬಳಿಕ ವಜ್ರಾಸನ ಮಾಡಿದರೆ, ಅದರಿಂದ ಜೀರ್ಣಕ್ರಿಯೆಯು ಉತ್ತಮವಾಗುವುದು. ಸೂರ್ಯ ನಾಡಿ ಮೇಲೆ ಒತ್ತಡ ಬೇಕಿದ್ದರೆ ಆಗ ಬಲದ ಹಿಂಗಾಲಿನ ಮೇಲೆ ಎಡದ ಹಿಂಗಾಲನ್ನು ಇಡಬೇಕು.
• ಚಂದ್ರನಾಡಿ ಮೇಲೆ ಒತ್ತಡ ಹಾಕಲು ಬಲದ ಹಿಂಗಾಲನ್ನು ಎಡದ ಹಿಂಗಾಲಿನ ಮೇಲೆ ಇಡಬೇಕು. ವಜ್ರಾಸನದಿಂದ ಮಲಬದ್ದತೆ ನಿವಾರಣೆ ಆಗುವುದು ಮತ್ತು ಇದು ದೇಹವು ಪೋಷಕಾಂಶಗಳನ್ನು ಉತ್ತಮ ಪ್ರಮಾಣದಲ್ಲಿ ಹೀರಿಕೊಳ್ಳಲು ಸಹಕಾರಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.