ಮೈಸೂರು(Mysuru): ವಾಹನ ಪರವಾನಗಿ ಪಡೆಯದೇ ವಾಹನಗಳನ್ನು ಸಂಚಾರಕ್ಕೆ ಬಳಸುವ ವ್ಯಕ್ತಿಗಳ ವಿರುದ್ಧ ಕೆಂಡಕಾರುವ ಆರ್’ಟಿಓ ಅಧಿಕಾರಿಗಳು, ಒಂದೇ ಶೋರೂಂ ನಡೆಸಲು ಪರವಾನಗಿ ಪಡೆದು ಅಕ್ರಮವಾಗಿ ಇನ್ನೆರಡು ಶೋರಂಗಳನ್ನು ನಡೆಸುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯಲ್ಲಿರುವ ಅದ್ವೈತ್ ಹುಂಡೈ ಶೋರೂಂ ನಡೆಸಲು ದಾಖಲೆಗಳನ್ನು ಸಲ್ಲಿಸಿ ಪರವನಾಗಿ ಪಡೆದುಕೊಂಡಿದ್ದು, ಜೆ.ಪಿ.ನಗರ ಹಾಗೂ ಬೆಳವಾಡಿಯಲ್ಲಿ ಅದೇ ದಾಖಲಾತಿಗಳನ್ನು ಮುಂದಿಟ್ಟುಕೊAಡು ವ್ಯಾಪಾರ ಪರವಾನಗಿ ಪಡೆಯದೇ ಹಲವಾರು ವರ್ಷಗಳಿಂದ ಶೋರೂಂ ನಡೆಸುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರು ಯಾವುದಾದರೊಂದು ನಿಯಮ ಗಾಳಿಗೆ ತೂರಿದರೇ ಮಹಾಪ್ರಮಾದ ಎಸಗಿರುವಂತೆ ವರ್ತಿಸುವ ಆರ್’ಟಿಓ ಅಧಿಕಾರಿಗಳು ಅಕ್ರಮವಾಗಿ ಎರಡು ಶೋರಂ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡನ್ನು ಪ್ರದರ್ಶಿಸುತ್ತಿರುವುದು ವಿಪರ್ಯಾಸ.
ಏನಿದು ಪ್ರಕರಣ?
ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯಲ್ಲಿದ್ದ ಅದ್ವೈತ್ ಹುಂಡೈ ಶೋರೂಂನಲ್ಲಿ ಇತ್ತೀಚಿಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಶೋರಂನಲ್ಲಿದ್ದ ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ನಂತರ ಅದ್ವೈತ್ ಹುಂಡೈ ಶೋರೂಂನ ಮಾಲೀಕ ಇನ್ಶೂರೆನ್ಸ್ ಕ್ಲೈಮ್’ಗೆ ಹಾಕಿದ್ದ ದಾಖಲೆಗಳಲ್ಲಿ ತೋರಿಸಿದ್ದಷ್ಟು ಕಾರುಗಳು ಶೋರೂಂನಲ್ಲಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೇ ಇನ್ಶೂರೆನ್ಸ್ ಹಣ ಪಡೆಯುವ ಕಾರಣಕ್ಕಾಗಿ ಮಾಲೀಕನೇ ಶಾರ್ಟ್ ಸರ್ಕ್ಯೂಟ್ ಮಾಡಿಸಿದ್ದಾನೆ ಎಂಬ ಆರೋಪವು ಇದೆ.
ಆದರೆ ಈ ಎಲ್ಲಾ ಬೆಳವಣಿಗೆಗಳ ನಂತರವೂ ಕೂಡ ಅದ್ವೈತ್ ಹುಂಡೈ ಶೋರೂಂನ ಮಾಲೀಕ ಇನ್ನೆರಡು ಕಡೆ ಶೋರಂಗಳನ್ನು ತೆರೆಯಲು ಆರ್’ಟಿಓ ಇಲಾಖೆಯಲ್ಲಿ ವ್ಯಾಪಾರ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದು, ಈ ವ್ಯಕ್ತಿಯ ಮೇಲೆ ಹಲವು ಆರೋಪಗಳ ತನಿಖೆ ನಡೆಸಬೇಕಾಗಿದ್ದ ಕಾರಣಕ್ಕಾಗಿ ವ್ಯಾಪಾರ ಪರವಾಗಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಆದಾಗಿಯೂ ಅದ್ವೈತ್ ಹುಂಡೈ ಮಾಲೀಕ ಜೆ.ಪಿ.ನಗರ ಹಾಗೂ ಬೆಳವಾಡಿಯಲ್ಲಿ ಶೋರೂಂ ತೆರೆದು ಕೆಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಆರ್’ಟಿಓ ಅಧಿಕಾರಿಗಳು ಇದನ್ನೂ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದು ಅಧಿಕಾರಿಗಳ ಬೇಜವಬ್ದಾರಿ ಹಾಗೂ ಭ್ರಷ್ಟಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅದ್ವೈತ್ ಹುಂಡೈ ಅಕ್ರಮವಾಗಿ ನಡೆಸುತ್ತಿರುವ ಶೋರಂಗಳ ತನಿಖೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.