ಮನೆ ಸುದ್ದಿ ಜಾಲ ಮುಳುಗುತ್ತಿದ್ದ ತಮ್ಮನ ರಕ್ಷಣೆಗೆ ಧಾವಿಸಿದ ಸಹೋದರಿಯರು ನೀರು ಪಾಲು

ಮುಳುಗುತ್ತಿದ್ದ ತಮ್ಮನ ರಕ್ಷಣೆಗೆ ಧಾವಿಸಿದ ಸಹೋದರಿಯರು ನೀರು ಪಾಲು

0

ಹರಪನಹಳ್ಳಿ: ಕೆರೆ ನೋಡಲು ಹೋಗಿದ್ದ  ವೇಳೆ ತಮ್ಮ ಕಾಲು ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಸಹೋದರಿಯರು ಸೇರಿದಂತೆ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚನ್ನಹಳ್ಳಿ ತಾಂಡದಲ್ಲಿ ಬುಧವಾರ ನಡೆದಿದೆ.

ನಂದಿಬೇವೂರು ತಾಂಡದ ಅಶ್ವಿನಿ ( 17), ಅವರ ಸಹೋದರ ಅಭಿಷೇಕ (14) , ಚೆನ್ನಹಳ್ಳಿ ತಾಂಡದ ಕಾವ್ಯ (19) ಮತ್ತು ತುಂಬಿನಕೇರಿ‌ ತಾಂಡದ ಅಪೂರ್ವ(14) ಮೃತರು.

ಇಬ್ಬರ ಮೃತದೇಹ‌ ಪತ್ತೆಯಾಗಿದ್ದು, ಗ್ರಾಮದ ಈಜುಪಟುಗಳು ಉಳಿದವರ ಮೃತದೇಹ ಪತ್ತೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಸಂಬಂಧಿಕರ ಮನೆಗೆ ಬಂದಿದ್ದ ವಿದ್ಯಾರ್ಥಿಗಳು ತುಂಬಿದ ಕೆರೆ ನೋಡಲು ಹೋಗಿದ್ದಾಗ ಅಭಿಷೇಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಆತನ ರಕ್ಷಣೆಗಿಳಿದು ಉಳಿದವರು ನೀರು ಪಾಲಾಗಿದ್ದಾರೆ ಎಂದು ಗೊತ್ತಾಗಿದೆ. ವಿಷಯ ತಿಳಿದು ಕೆರೆ ದಂಡೆಯಲ್ಲಿ ನೂರಾರು ಜನ ಸೇರಿದ್ದಾರೆ.

ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.