ಮನೆ ಸುದ್ದಿ ಜಾಲ ನಾರಾಯಣಚಾರ್ಯರ ಗ್ರಂಥಗಳ ರಚನೆ ಹಿಂದೂ ಸಮಾಜಕ್ಕೆ ಶಾಶ್ವತ ಕೊಡುಗೆ: ಪೂರ್ಣಿಮಾ ಕೆ.ವಿ

ನಾರಾಯಣಚಾರ್ಯರ ಗ್ರಂಥಗಳ ರಚನೆ ಹಿಂದೂ ಸಮಾಜಕ್ಕೆ ಶಾಶ್ವತ ಕೊಡುಗೆ: ಪೂರ್ಣಿಮಾ ಕೆ.ವಿ

0

ಮೈಸೂರು(Mysuru): ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಹುಭಾಷಾ ವಿದ್ವಾಂಸ ಪ್ರೊ.ಕೆ ಎಸ್ ನಾರಾಯಣಾಚಾರ್ಯರ ಪ್ರಥಮ ಪುಣ್ಯ ಸ್ಮರಣೆಯಲ್ಲಿ ಆಚಾರ್ಯ ಸ್ಮರಣ ಕಾರ್ಯಕ್ರಮವನ್ನು ಬಿಬಿಎಂಪಿ ಜಂಟಿ ಕಮಿಷನರ್ ಪೂರ್ಣಿಮಾ ಕೆ.ವಿ ಉದ್ಘಾಟಿಸಿದರು.

 ನಂತರ ಮಾತನಾಡಿದ ಅವರು, ಡಾ.ಕೆ.ಎಸ್ ನಾರಾಯಣಚಾರ್ಯರು ರಚಿಸಿದ ಗ್ರಂಥಗಳ ರಚನೆ ಹಿಂದೂ ಸಮಾಜಕ್ಕೆ ಶಾಶ್ವತ ಕೊಡುಗೆ, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾದ ಅವರು ಕನ್ನಡ ಮತ್ತು ಸಂಸ್ಕೃತಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು ಎಂದು ಹೇಳಿದರು.

ರಾಷ್ಟ್ರಭಕ್ತಿ, ಸಂಸ್ಕೃತಗಳ ಪರಮ ಆರಾಧಕರಾಗಿದ್ದರು, ನಂಬಿದ ಮೌಲ್ಯಗಳಿಗೆ ನಿಷ್ಠರಾಗಿ ಬದುಕಿದವರು, ರಾಮಾಯಣ ಹಾಗೂ ಮಹಾಭಾರತದ ಪ್ರವಚನದಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ನಡೆದಾಡುವ ಸನಾತನ ಗ್ರಂಥಾ ಎಂದು ಕರೆಯಲಾಗುತ್ತಿತ್ತು.  ಶಿಕ್ಷಣ ಹಾಗೂ ಪ್ರವಚನಗಳಿಂದ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದರು, ಅವರ ಪುಸ್ತಕ ಮತ್ತು ಲೇಖನ ಹಾಗೂ ವಚನ ಮಾಲಿಕೆಗಳ ಮೂಲಕ ನಮ್ಮೊಂದಿಗೆ ಶಾಶ್ವತವಾಗಿದ್ದಾರೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂಅಯ್ಯಂಗಾರ್ ಮಾತನಾಡಿ, ಸರ್ಕಾರ ಸಹ ಅವರ ಹೆಸರನ್ನು ಶಾಶ್ವತವಾಗಿರಿಸಲು ಮೈಸೂರಿನ ಗ್ರಂಥಾಲಯಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ವಿಪ್ರ ಮುಖಂಡರಾದ ನಂ ಶ್ರೀಕಂಠ ಕುಮಾರ್, ಬಿಬಿಎಂಪಿ ವಿಶೇಷ ಅಧಿಕಾರಿ ಎಸ್ ಎನ್ ಶಂಕರ್, ಇಳೈ ಆಳ್ವಾರ್ ಸ್ವಾಮೀಜಿ, ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ಸದಸ್ಯ ಎಂ ಆರ್ ಬಾಲಕೃಷ್ಣ, ಅರ್ಚಕರ ಸಂಘದ ಅಧ್ಯಕ್ಷರಾದ ವಿ. ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಗೌರವಾಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಅರ್ಚಕರ ಸಂಘದ ಸಹಕಾರ್ಯದರ್ಶಿ ಪ್ರಶಾಂತ್, ಟಿ ಎಸ್ ಅರುಣ್, ಸುಚಿಂದ್ರ, ಚಕ್ರಪಾಣಿ, ರಾಕೇಶ್ ಭಟ್, ಶ್ರೀನಿವಾಸ ಪ್ರಸಾದ್, ಜಯಸಿಂಹ ಶ್ರೀಧರ್, ಅಪೂರ್ವ ಸುರೇಶ್, ಕೆ ಎಂ ನಿಶಾಂತ್ ಹಾಜರಿದ್ದರು.