ಮನೆ ಅಪರಾಧ ಬೈಕ್-ಕ್ಯಾಂಟರ್ ನಡುವೆ ಅಪಘಾತ: ಇಬ್ಬರು ಸಾವು

ಬೈಕ್-ಕ್ಯಾಂಟರ್ ನಡುವೆ ಅಪಘಾತ: ಇಬ್ಬರು ಸಾವು

0

ದೇವನಹಳ್ಳಿ: ಬೈಕ್ ಹಾಗೂ ಕ್ಯಾಂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ-ದೊಡ್ಡಬಳ್ಳಾಪುರ ರಸ್ತೆಯ ಲಕ್ಷ್ಮಿಪುರ ಗೇಟ್ ಬಳಿ ತಡರಾತ್ರಿ ನಡೆದಿದೆ.

ಬಾಲೇಪುರ ಗ್ರಾಮದ ರಾಕೇಶ್ (22) ಹಾಗೂ ದೇವನಹಳ್ಳಿ ಪಟ್ಟಣದ ಪ್ರತಾಪ್ (28) ಮೃತರು.

ಬೈಕ್​​ನಲ್ಲಿ ಹೋಗುತ್ತಿದ್ದಾಗ ಎದುರುನಿಂದ ಬಂದ ಕ್ಯಾಂಟರ್ ಡಿಕ್ಕಿ‌ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್‌ನೊಳಗೆ ಅರ್ಧ ಬೈಕ್ ಸಿಲುಕಿದೆ.

ದಿಲೀಪ್ ಬಿಲ್ಡ್ ಕನ್ಸ್ಟ್ರಕ್ಷನ್‌’ನಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ರಸ್ತೆ ವಿಭಜಕದಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಸದ ಕಾರಣ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್​ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.