ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮೈಸೂರು(Mysuru): ಜೆಡಿಎಸ್–ಕಾಂಗ್ರೆಸ್ ಶಾಸಕರನ್ನೆಲ್ಲಾ ಬಾಂಬೆಗೆ ಕರೆದುಕೊಂಡು ಹೋದವನೇ ಎ.ಎಚ್.ವಿಶ್ವನಾಥ್ ಎಂದು ಎಂದು ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆರೋಪಿಸಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿಗೆ ಬರುವಂತೆ ನಾನೇನೂ ಆತನನ್ನು ಕರೆದಿರಲಿಲ್ಲ. ಅವನೇ ನನ್ನ ಮನೆಗೆ ಬಂದಿದ್ದ. ಜೆಡಿಎಸ್’ನಲ್ಲಿ ಇರುವುದಕ್ಕೆ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದ. ಬಿ.ಎಸ್.ಯಡಿಯೂರಪ್ಪ ಜೊತೆ ಚರ್ಚಿಸುವಂತೆ ತಿಳಿಸಿದ್ದೆ ಎಂದರು.
ಉಪ ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ ಪಕ್ಷದ ಬಗ್ಗೆ ಕೃತಜ್ಞತೆ ಇಲ್ಲದೇ ಮಾತನಾಡುತ್ತಿದ್ದಾನೆ. ಕೀಟಲೆ ಮಾಡಿಕೊಂಡಿರುವುದೇ ಅವನ ಪ್ರವೃತ್ತಿ ಎಂದು ವಾಗ್ದಾಳಿ ನಡೆಸಿದರು.
ಹುಣಸೂರು ಕ್ಷೇತ್ರದ ಉಪ ಚುನಾವಣೆ ಖರ್ಚಿಗೆಂದು ಬಿಜೆಪಿಯವರು ಕೊಟ್ಟಿದ್ದ 15 ಕೋಟಿಯಲ್ಲಿ 10 ಕೋಟಿಯನ್ನು ಜೇಬಿಗಿಳಿಸಿಕೊಂಡ. ಎ.ಎಚ್.ವಿಶ್ವನಾಥನಿಂದ ನಾನು ಕಲಿಯಬೇಕಿಲ್ಲ ಎಂದು ಹರಿಹಾಯ್ದರು.
ವಿಶ್ವನಾಥ್ ಬೊಗಳುವ ನಾಯಿ: ನನ್ನನ್ನು ಅಲೆಮಾರಿಗಳ ರಾಜ ಎಂದೆಲ್ಲಾ ಟೀಕಿಸಿದ್ದಾನೆ. ನಾನು ಮುತ್ಸದ್ದಿ. ಸ್ವಾಭಿಮಾನದ ಚಕ್ರವರ್ತಿ. ಆ ಕಾರಣದಿಂದಲೇ ಜನರು ಗೌರವಿಸುತ್ತಾರೆ. ವಿಶ್ವನಾಥ್ ಬೊಗಳುವ ಹಾಗೂ ಕಚ್ಚುವ ನಾಯಿಯೂ ಆಗಿದ್ದಾನೆ. ಅಂತಹ ಕೊಳಕು ಜೀವನವನ್ನು ನಾನು ನಡೆಸಿಲ್ಲ. ಈಗ, ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾನೆ. ಆತ ದೂರಿರುವಂತೆ, ಕುಟುಂಬ ರಾಜಕಾರಣದ ಅಗತ್ಯ ನನಗಿಲ್ಲ ಎಂದು ಗುಡುಗಿದರು.
ಕಾಂಗ್ರೆಸ್’ನಲ್ಲಿದ್ದಾಗ, ಸೋತರೆ ಪಾಠ ಮಾಡಿಕೊಂಡಿರುತ್ತೇನೆ ಎಂದು ಹೇಳಿ ಸಿದ್ದರಾಮಯ್ಯ ಬಳಿ ಟಿಕೆಟ್ ಪಡೆದಿದ್ದರು. ಆದರೆ, ಪಾಠ ಮಾಡಲು ಹೋಗಲಿಲ್ಲ; ಕೀಟಲೆ ಮಾಡುತ್ತಿದ್ದಾರೆ. ಸೋತ ನಂತರವೂ ಸಿದ್ದರಾಮಯ್ಯ ಬಳಿ ಹಣಕ್ಕೆ ಬೇಡಿಕೆ ಇಡಲಿಲ್ಲವಾ? ಅಧಿಕಾರ ಕೇಳಲಿಲ್ಲವಾ? ಕಾಂಗ್ರೆಸ್ನಲ್ಲಿ ಅವರಿಗೆ ಆಗಿದ್ದ ಅನ್ಯಾಯವಾದರೂ ಏನು? ಎಂದು ಕೇಳಿದರು. ಅವರಿಗೆ ಟಿಕೆಟ್ ಕೊಡಿಸಿ, ಮಂತ್ರಿ ಮಾಡಿದವ ನಾನು. ಅದು ನೆನಪಿಲ್ಲವೇ ಎಂದು ಪ್ರಶ್ನಿಸಿದರು.
ವೇಷ ಬದಲಿಸಿಕೊಂಡು ಶಿಕಾರಿಗೆ ಹೋಗುತ್ತಿದ್ದಾನೆ. ಅವನನ್ನು ಎಲ್ಲ ಕಡೆಯಿಂದಲೂ ಗೂಳಿಗಳು ಅಟ್ಟಿಸಿಕೊಂಡು ಬರುತ್ತಿವೆ ಎಂದು ನೀತಿಪಾಠವೊಂದನ್ನು ಹೇಳಿ ಕುಟುಕಿದರು.
ನನಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ಮುಖ್ಯವೇ ಹೊರತು ಪಕ್ಷ, ಅಧಿಕಾರವಲ್ಲ. ಸಂವಿಧಾನಕ್ಕೆ ಧಕ್ಕೆಯಾದಾಗ ಬಿಜೆಪಿಯವರನ್ನೂ ಪ್ರಶ್ನಿಸಿದ್ದೇನೆ; ಪ್ರಶ್ನಿಸುತ್ತೇನೆ. ಆ ಬದ್ಧತೆ ಉಳಿಸಿಕೊಂಡಿದ್ದೇನೆ ಎಂದರು.