ಮನೆ ಸುದ್ದಿ ಜಾಲ ಮೈಸೂರು: ಚಿರತೆಗೆ ಕುಡುಗೋಲಿನಿಂದ ಹೊಡೆದು ಪ್ರಾಣ ಉಳಿಸಿಕೊಂಡ ರೈತ

ಮೈಸೂರು: ಚಿರತೆಗೆ ಕುಡುಗೋಲಿನಿಂದ ಹೊಡೆದು ಪ್ರಾಣ ಉಳಿಸಿಕೊಂಡ ರೈತ

0

ಮೈಸೂರು(Mysuru): ಚಿರತೆಗೆ ಕುಡುಗೋಲಿನಿಂದ ಹೊಡೆದು ಪ್ರಾಣಾಪಾಯದಿಂದ ಅನ್ನದಾತ ಪಾರಾಗಿರುವ ಘಟನೆ ತಿ.ನರಸೀಪುರ ತಾಲ್ಲೂಕಿನಲ್ಲಿ ಗೊರವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಯಾದ ರೈತ ನಿಂಗೇಗೌಡ ಚಿರತೆಯಿಂದ ಪ್ರಾಣ ಉಳಿಸಿಕೊಂಡವರು.

ಕಬ್ಬಿನ ಗದ್ದೆ ತರಗಿಗೆ ಬೆಂಕಿ ಹಾಕುತ್ತಿದ್ದ ವೇಳೆ ನಿಂಗೇಗೌಡ ಮೇಲೆ ಚಿರತೆ ದಾಳಿ ಮಾಡಿದೆ. ಆ ಸಂದರ್ಭದಲ್ಲಿ ಕೈಯಲ್ಲಿದ್ದ ಕುಡುಗೋಲಿನಿಂದ ಚಿರತೆಗೆ ಹೊಡೆದು ನಿಂಗೇಗೌಡ ಧೈರ್ಯ ತೋರಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

ಗಾಯಗೊಂಡಿರುವ ರೈತ ನಿಂಗೇಗೌಡ ಬನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.