ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 36 ವರ್ಷಗಳಾಗಿವೆ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಹೊಸ ಮಾದರಿಯ ಕಥೆಗಳ ಆಯ್ಕೆಗಳನ್ನು ಶಿವಣ್ಣ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ತೆರೆಕಂಡಿರುವ ಅವರ ನಟನೆಯ 125ನೇ ಸಿನಿಮಾ ‘ವೇದ’ ಕೂಡ ಆ ಥರದ್ದೊಂದು ವಿಭಿನ್ನ ಆಯ್ಕೆ. ನಿರ್ದೇಶಕ ಹರ್ಷ ಈ ಬಾರಿ ಶಿವಣ್ಣ ಜೊತೆಗೆ ಕೈಜೋಡಿಸಿ ‘ವೇದ’ ಚಿತ್ರವನ್ನು ತೆರೆಗೆ ತಂದಿದ್ದಾರೆ.
‘ವೇದ’ ಸಿನಿಮಾದ ಪ್ರಮುಖ ಆಕರ್ಷಣೆ ವೇದ (ಶಿವರಾಜ್ ಕುಮಾರ್) ಮತ್ತು ಮಗಳು ಕನಕ (ಅದಿತಿ ಸಾಗರ್). ಸಿನಿಮಾ ಶುರುವಿನಿಂದ ಅಂತ್ಯದವರೆಗೂ ಈ ಅಪ್ಪ-ಮಗಳು ರಕ್ತದೊಕುಳಿಯನ್ನೇ ಆಡುತ್ತಾರೆ. ಅಪ್ಪನಿಗಿಂತ ಒಂದು ಹೆಜ್ಜೆ ಮುಂದಿರುವ ಕನಕ ಕೈಯಲ್ಲಿ ಕಲ್ಲಿಡಿದು ಖಳರನ್ನು ಜಜ್ಜುತ್ತಲೇ ಸಾಗುತ್ತಾಳೆ. ಆಗೆಲ್ಲ ಪ್ರೇಕ್ಷಕರು ಹೃದಯವನ್ನು ಕಲ್ಲು ಮಾಡಿಕೊಂಡು ನೋಡಬೇಕು. ಅಷ್ಟೊಂದು ಭಯಾನಕವಾಗಿ ಸಂಹಾರ ಸಾಗುತ್ತದೆ. ಈ ಅಪ್ಪ-ಮಗಳ ಆಕ್ರೋಶಕ್ಕೆ, ಸೇಡಿಗೆ ಒಂದು ಬಲವಾದ ಕಾರಣವಿದೆ. ಅದೇನು ಅನ್ನೋದೇ ಸಿನಿಮಾದ ಕ್ಲೈಮ್ಯಾಕ್ಸ್.
ವೇದನಾಗಿ ಶಿವರಾಜ್ ಕುಮಾರ್ ಎಂದಿನಂತೆ ಖಡಕ್ ಅಭಿನಯ ನೀಡಿದ್ದಾರೆ. ಅವರಿಗೆ ಎರಡು ಶೇಡ್ ಇದೆ. ಮಾತಿಗಿಂತ ಮೌನದಲ್ಲೇ, ಕಣ್ಣೋಟದಲ್ಲೇ ಹೆಚ್ಚು ಕಿಕ್ ನೀಡುತ್ತಾರೆ. ಅವರ ಎನರ್ಜಿ ನೋಡಿದರೆ, ಇವರಿಗೆ 60 ವರ್ಷ ಆಗಿದೆಯೇ ಎಂಬುದನ್ನು ನಂಬಲು ಸಾಧ್ಯವಿಲ್ಲ! ಅಷ್ಟೊಂದು ಲವಲವಿಕೆಯಿಂದ ಡ್ಯಾನ್ಸ್, ಫೈಟ್ಸ್ ಮಾಡಿದ್ದಾರೆ. ಅವರಿಗೆ ಸರಿಸಮನಾಗಿ ಮೊದಲ ಅವಕಾಶದಲ್ಲೇ ಮಿಂಚಿರುವುದು ಅದಿತಿ ಸಾಗರ್. ಮಗಳು ಕನಕಾಳ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅವರದಿಲ್ಲಿ ಮಾತು ಕಮ್ಮಿ, ಕೈ ಮುಂದೆ ಅನ್ನೋ ಥರದ ಪಾತ್ರ. ಡೈಲಾಗ್’ಗಿಂತ ಎದುರಾಳಿಗಳನ್ನು ಮಟ್ಟ ಹಾಕುವುದರಲ್ಲೇ ಹೆಚ್ಚು ಸ್ಕೋರ್ ಮಾಡಿದ್ದಾರೆ ಅದಿತಿ. ಮೊದಲ ಚಿತ್ರದಲ್ಲೇ ತುಂಬ ಭರವಸೆಯನ್ನು ಮೂಡಿಸಿದ್ದಾರೆ.
ಗಾನವಿ ಲಕ್ಷ್ಮಣ್ ಕೂಡ ಎರಡು ಶೇಡ್’ನಲ್ಲಿ ಮಿಂಚಿದ್ದಾರೆ. ಶ್ವೇತಾ ಚೆಂಗಪ್ಪ ಪಾತ್ರಕ್ಕೆ ಜಾಸ್ತಿ ಮಹತ್ವ ಇದೆ. ಉಮಾಶ್ರೀ ತೆರೆಮೇಲೆ ಇದ್ದಷ್ಟು ಹೊತ್ತು, ನಕ್ಕು ನಗಿಸುತ್ತಾರೆ ಮತ್ತು ಅಭಿನಯದಿಂದ ಮೋಡಿ ಮಾಡುತ್ತಾರೆ.
ವೃತ್ತಿಜೀವನದಲ್ಲಿ ಮಹತ್ವದ ಪಾತ್ರ ರಾಘು ಶಿವಮೊಗ್ಗಗೆ ಸಿಕ್ಕಿದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿ. ಗುರುದತ್, ಮಂಜು ಪಾವಗಡ, ಗೋವಿಂದೇಗೌಡ, ವೀಣಾ ಪೊನ್ನಪ್ಪ, ‘ಸ್ಪರ್ಶ’ ರೇಖಾ ತಮಗೆ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಖಳರಾಗಿ ಭರತ್ ಸಾಗರ್, ಚೆಲುವರಾಜ್, ಸಂಜೀವ್, ವಿನಯ್ ಬಿದ್ದಪ್ಪ ಮಿಂಚಿದ್ದಾರೆ.
ಸಿನಿಮಾಗೆ ಶಿವಣ್ಣ ಹೀರೋ ಆಗಿದ್ದರೂ ಕೂಡ ಕಥೆಗೆ ಎಷ್ಟು ಬೇಕೋ ಅಷ್ಟೇ ಅವರಿಗೆ ಪ್ರಾಧಾನ್ಯತೆ ನೀಡಲಾಗಿದೆ. ಶಿವಣ್ಣನ ಪಾತ್ರಕ್ಕಿಂತಲೂ ಮಹಿಳಾ ಪಾತ್ರಗಳೇ ಒಮ್ಮೊಮ್ಮೆ ಹೆಚ್ಚು ಅಬ್ಬರಿಸುತ್ತವೆ. ನಿರ್ದೇಶಕ ಹರ್ಷ ಈ ಬಾರಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಹೇಳಿದ್ದಾರೆ.
ನಾರಿ ಮುನಿದರೆ ಮಾರಿ ಅನ್ನೋದನ್ನು ಬಲವಾಗಿ ನಂಬಿರುವ ಹರ್ಷ, ಮಹಿಳಾ ಪಾತ್ರಗಳ ಮೂಲಕವೇ ಖಡಕ್ ಆಗಿ ಫೈಟ್ ಮಾಡಿಸಿ, ಅಚ್ಚರಿ ಮೂಡಿಸುತ್ತಾರೆ. ಇಡೀ ಸಿನಿಮಾ ಡಾರ್ಕ್ ಶೇಡ್’ನಲ್ಲಿದೆ. ಬೆಳಕಿಗಿಂತ ಕತ್ತಲೆಯೇ ಹೆಚ್ಚು ಆವರಿಸಿದೆ.
ನಿರ್ದೇಶಕರ ಆಶಯಕ್ಕೆ ತಕ್ಕಂತೆ ಛಾಯಾಗ್ರಾಹಕ ಸ್ವಾಮಿ ಜೆ. ಗೌಡ ಕೆಲಸವೂ ಮೂಡಿಬಂದಿದೆ. ನಿರೂಪಣೆಯಲ್ಲಿ ಹೊಸ ಶೈಲಿಯನ್ನು ಹರ್ಷ ಅನುಸರಿಸಿದ್ದಾರೆ. ಕಥೆ ಆಗಾಗ 60, 80ರ ದಶಕದ ನಡುವೆ ಹೋಯ್ದಾಡುತ್ತದೆ. ಇದೊಂದು ಪ್ರತೀಕಾರದ ಕಥೆ ಎಂಬುದು ಆರಂಭದಲ್ಲೇ ಗೊತ್ತಾಗುತ್ತದೆ. ಕೆಲವೊಂದು ತಿರುವುಗಳನ್ನು ಮೊದಲೇ ಊಹಿಸಬಹುದಾಗಿದೆ. ಚಿತ್ರಕಥೆ ಮೇಲೆ ಇನ್ನಷ್ಟು ವರ್ಕ್ ಮಾಡಬಹುದಿತ್ತು. ‘ಗಿಲ್ಲಾಕ್ಕೋ ಶಿವ..’ ಹಾಡು ಸ್ಟೆಪ್ ಹಾಕುವಂತೆ ಇದ್ದರೆ, ಜುಂಜಪ್ಪನ ಹಾಡಿನಲ್ಲಿ ಹೊಸತನ ಇದೆ. ಹಾಡುಗಳಿಗಿಂತ ಹಿನ್ನೆಲೆ ಸಂಗೀತ ಮೂಲಕ ಅರ್ಜುನ್ ಜನ್ಯ ಹೊಸತನವನ್ನು ನೀಡಿದ್ದಾರೆ.