ಮನೆ ಅಪರಾಧ ಬಸ್ – ಆಟೋ ನಡುವೆ ಅಪಘಾತ: ಮೂವರ ಸಾವು

ಬಸ್ – ಆಟೋ ನಡುವೆ ಅಪಘಾತ: ಮೂವರ ಸಾವು

0

ಕಲಬುರಗಿ: ನಗರದ ಹೊರ ವಲಯ ಕೇಂದ್ರ ಕಾರಾಗೃಹ ಬಳಿ ಬಸ್ ಹಾಗೂ ಆಟೋ ನಡುವೆ ಸಂಭವಿಸಿದ ಡಿಕ್ಕಿ ಅಪಘಾತದಲ್ಲಿ ಆಟೋ ಡ್ರೈವರ್ ಸೇರಿ ಮೂವರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಚಂದ್ರಕಲಾ ಗಂಡ ತಿಪ್ಪಣ್ಣ ಇಜೇರಿ (30 ವ) ದೇವಕಿ ತಂದೆ ರಾಜೇದ್ರ ಇಜೇರಿ (20 ವ) ಹಾಗೂ ಚಾಲಕ ಪ್ರಲ್ಹಾದ ತಂದೆ ರಾಣಪ್ಪ ಕಟ್ಟಿಮನಿ (28 ವ) ಎನ್ನುವರೇ ಮೃತಪಟ್ಟಿದ್ದಾರೆ.‌

ಅಪಘಾತದಲ್ಲಿ ಆಟೋ ನುಜ್ಜುಗುಜ್ಜಾಗಿದ್ದು, ಗುರುತು ಸಿಗದಂತಾಗಿದೆ.‌ ಚಾಲಕ ಖಣದಾಳ ಗ್ರಾಮದವನಾಗಿದ್ದರೆ ಇಬ್ಬರು‌ ಮಹಿಳೆಯರು ಇಟಗಾ ಗ್ರಾಮದವರಾಗಿದ್ದಾರೆ.

ಇದೇ ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕಲಬುರಗಿ ಮಹಾನಗರ ಸಂಚಾರಿ ಠಾಣಾ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.‌

ಹಿಂದಿನ ಲೇಖನ9 ತಿಂಗಳು ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಹೆಲ್ಮೆಟ್: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌
ಮುಂದಿನ ಲೇಖನರಾಯಚೂರಿನಲ್ಲಿ ಟೆಕ್ಸ್ ಟೈಲ್ ಪಾರ್ಕ್ ಹಾಗೂ ವಿಮಾನ ನಿಲ್ದಾಣ ಸ್ಥಾಪನೆ ಸಿಎಂ ಘೋಷಣೆ: ಸಚಿವ ಎನ್ ಎಸ್ ಬೋಸರಾಜು ಹರ್ಷ