ಮನೆ ರಾಜಕೀಯ ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿದ್ದು ಒಡೆಯರ್: ಸಿ.ಟಿ.ರವಿ

ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿದ್ದು ಒಡೆಯರ್: ಸಿ.ಟಿ.ರವಿ

0

ಮಂಡ್ಯ(Mandya): ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿದ್ದು ಒಡೆಯರ್ ಅವರೇ ಹೊರತು, ಟಿಪ್ಪು ಅಲ್ಲ. ಉರಿಗೌಡ, ದೊಡ್ಡನಂಜೇಗೌಡರು ನಿಜವಾದ ಹುಲಿಗಳು. ಅವರ ಪ್ರತಿಮೆಯನ್ನು ನಾನು ಹಾಗೂ ಸಿ.ಪಿ.ಯೋಗೇಶ್ವರ್ ಮಾಡಲಿದ್ದೇವೆ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ನಗರದಲ್ಲಿ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಮುಂದಿನ ಚುನಾವಣೆ ಮೂಡಲ ಆಂಜನೇಯಸ್ವಾಮಿ ಹಾಗೂ ಮುಲ್ಲಾಸಾಬಿ ನಡುವಿನ ಚುನಾವಣೆಯಾಗಿದೆ ಎಂದು ಸಿ.ಟಿ.ರವಿ ಹೇಳಿದರು.

ಜಿಲ್ಲೆಯ ಜನ ಬಾಕಿ ತೀರಿಸಬೇಕಾಗಿದೆ. ಇದೊಂದು ಟಿಪ್ಪು ಹಾಗೂ ಒಡೆಯರ್ ನಡುವಿನ ಚುನಾವಣೆಯಾಗಿದೆ. ಈಗಾಗಲೇ ದತ್ತಪೀಠಕ್ಕೆ ನ್ಯಾಯ ಒದಗಿಸಿದ್ದೇವೆ. ಅದರಂತೆ ಹನುಮಪ್ಪನಿಗೂ ನ್ಯಾಯ ಒದಗಿಸುತ್ತೇವೆ ಎಂದರು.

ಅಜ್ಜ ಮೊಮ್ಮಗನಿಗೆ ಹಾಗೂ ತಾಯಿ ಮಗನಿಗೆ ಸ್ಥಾನ ಬಿಟ್ಟು ತ್ಯಾಗ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಅದನ್ನು ತ್ಯಾಗ ಎನ್ನುವುದಿಲ್ಲ. ಅದನ್ನು ಸ್ವಾರ್ಥ ಎನ್ನುತ್ತಾರೆ. ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಗುಡುಗಿದರು.