ಮನೆ ರಾಷ್ಟ್ರೀಯ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 14 ಮಂದಿ ಜೀವಂತ ದಹನ

ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 14 ಮಂದಿ ಜೀವಂತ ದಹನ

0

ಜಾರ್ಖಂಡ್: ಬಹುಮಹಡಿ ಕಟ್ಟಡವೊಂದರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿ 14 ಮಂದಿ ಜೀವಂತ ದಹನವಾಗಿರುವ ಘಟನೆ ಧನ್‌’ಬಾದ್‌’ನ ಜೋರಫಾತಕ್ ವಲಯದಲ್ಲಿ ನಡೆದಿದೆ.

ಹಲವರು ಕಟ್ಟಡದಲ್ಲಿ ಸಿಲುಕಿದ್ದಾರೆ. ಅಗ್ನಿಶಾಮಕ ಸೇವೆಯ 40 ವಾಹನಗಳು ಧಾವಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ ಎಂದು ಡಿಸಿಪಿ ಸಂದೀಪ್‌ ಸಿಂಗ್ ಹೇಳಿದರು.

11 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರು ತಿಳಿಸಿದ್ದಾರೆ.

ಘಟನೆಗೆ ಮುಖ್ಯಮಂತ್ರಿ ಹೇಮಂತ್ ಸೋರನ್ ಸಂತಾಪ ಸೂಚಿಸಿದ್ದಾರೆ.