ಮನೆ ಸುದ್ದಿ ಜಾಲ ಮೈಸೂರು: ಕೊರಗಜ್ಜ ದೇವಸ್ಥಾನದ ಹಣಕ್ಕಾಗಿ ಅರ್ಚಕ , ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ

ಮೈಸೂರು: ಕೊರಗಜ್ಜ ದೇವಸ್ಥಾನದ ಹಣಕ್ಕಾಗಿ ಅರ್ಚಕ , ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ

0

ಮೈಸೂರು:  ಇಲ್ಲಿನ ಕೊರಗಜ್ಜ ದೇವಸ್ಥಾನದಿಂದ ಬರುವ ಹಣ ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಚಕ ಮತ್ತು  ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ ನಡೆದಿದೆ.

ಆರ್.ಟಿ.ನಗರದಲ್ಲಿರುವ ಕೊರಗಜ್ಜ ದೇವಸ್ಥಾನಕ್ಕೆ ಲಕ್ಷಾಂತರ ರೂ. ಹಣ ಹರಿದು ಬರುತ್ತಿದ್ದು, ಹಣ ಹಂಚಿಕೊಳ್ಳಲು ದೇವಸ್ಥಾನದ ಅರ್ಚಕ ತೇಜುಕುಮಾರ್  ಹಾಗೂ ಟ್ರಸ್ಟ್ ಅಧ್ಯಕ್ಷ ಬಂಗಾರಪ್ಪ ನಡುವೆ ಕಿತ್ತಾಟ ನಡೆದಿದೆ.

ಈ ವೇಳೆ ಬೇಸತ್ತ ಅರ್ಚಕನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೈಸೂರಿನ ಅರವಿಂದನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೇವಸ್ಥಾನಕ್ಕೆ ಲಕ್ಷಾಂತರ ರೂ ಹಣ ಬರ್ತಿದ್ದ ಕಾರಣ ಅರ್ಚಕ ತೇಜುಕುಮಾರ್’ಗೆ ಟ್ರಸ್ಟ್ ಅಧ್ಯಕ್ಷ ಬಂಗಾರಪ್ಪ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.

ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವುದನ್ನು ಗಮನಿಸಿ ಪಕ್ಕದಲ್ಲಿ ಮತ್ತೊಂದು ದೇವಸ್ಥಾನ ತಲೆ ಎತ್ತಿದ್ದು, ರಾಜ, ದೈವ, ಗುಳಿಗ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.  ದೇವಸ್ಥಾನದ ಹುಂಡಿಯನ್ನು ಅರ್ಚಕ ಮನೆಗೆ ತೆಗೆದುಕೊಂಡು‌ ಹೋಗಿದ್ದು,  ಜಯಪುರ ಠಾಣೆಯಲ್ಲಿ ಮೌಖಿಕ ದೂರಿನನ್ವಯ ತನಿಖೆ ನಡೆಸಲಾಗುತ್ತಿದೆ.