ಮನೆ ಸುದ್ದಿ ಜಾಲ ರಾಮನಗರ: ಹೊತ್ತಿ ಉರಿದ ರಾಗಿ ಖರೀದಿ ಕೇಂದ್ರದ ಗೋದಾಮು

ರಾಮನಗರ: ಹೊತ್ತಿ ಉರಿದ ರಾಗಿ ಖರೀದಿ ಕೇಂದ್ರದ ಗೋದಾಮು

0

ರಾಮನಗರ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ರಾಗಿ ಖರೀದಿ ಕೇಂದ್ರದ ಗೋದಾಮು ಹೊತ್ತಿ ಉರಿದಿರುವ ಘಟನೆ ಮಾಗಡಿ ತಾಲ್ಲೂಕಿನ ಸೋಲೂರು ಬಳಿ ಗುರುವಾರ ನಡೆದಿದೆ.

ಗೋದಾಮಿನ ಮುಂಭಾಗ ಇದ್ದ ಟ್ರಾನ್ಸ್ ಫಾರ್ಮರ್‌ನಿಂದ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ನೂರಾರು ರಾಗಿ ಮೂಟೆಗಳು ಹಾಗೂ 2 ಲಕ್ಷಕ್ಕೂ ಹೆಚ್ಚು ಖಾಲಿ ಚೀಲಗಳು ಬೆಂಕಿಗೆ ಆಹುತಿ ಆಗಿವೆ. ನಾಲ್ಕು ಅಗ್ನಿಶಾಮಕ ದಳದ ವಾಹನಗಳ ಮೂಲಕ ಸಿಬ್ಬಂದಿ ಬೆಂಕಿ ನಂದಿಸಿದರು.