ದಕ್ಷಿಣ ಕನ್ನಡ: ಇತ್ತೀಚೆಗೆ ನಡೆದ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡದ ಮೂವರು ವಕೀಲರು ನೇಮಕಗೊಂಡಿದ್ದಾರೆ.
ಮೂಡಬಿದಿರೆಯ ಸುನೀತಾ ಭಂಡಾರಿ, ಶ್ರುತಿ.ಕೆ.ಎಸ್. ಮತ್ತು ಜೊಯ್ಲಿನ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ನ್ಯಾಯಾಧೀಶರ ನೇಮಕಾತಿ ಸಮಿತಿ ಪ್ರಕಟಿಸಿದ ೭೫ ಮಂದಿ ಯಶಸ್ಸಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಸುನೀತಾ ಭಂಡಾರಿ ಅವರು ಮೂಡಬಿದಿರೆ ವಕೀಲರ ಸಂಘದ ಸದಸ್ಯೆಯಾಗಿದ್ದಾರೆ.
ಮಂಗಳೂರು ವಕೀಲರ ಸಂಘದ ಜೋಯ್ಲಿನ್ ಮತ್ತು ರಂಜಿತ್ ನಾಯ್ಕ್ ಅವರ ಪುತ್ರಿ ಶ್ರುತಿ.ಕೆ.ಎಸ್. ಅವರು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.