ಮನೆ ಅಪರಾಧ ಚಾಲಕನ ನಿಯಂತ್ರ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ  ಮಿನಿ ಲಾರಿ: ಒಂದೇ ಕುಟುಂಬದ ಮೂವರು ಸಾವು

ಚಾಲಕನ ನಿಯಂತ್ರ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ  ಮಿನಿ ಲಾರಿ: ಒಂದೇ ಕುಟುಂಬದ ಮೂವರು ಸಾವು

0

ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಲಾರಿ ರಸ್ತೆ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು, ಒಂದೇ ಕುಟುಂಬದ ಮೂವರು ಮೃತಪಟ್ಟ ಪಟ್ಟಿರುವ ಘಟನೆ ನಗರದ ಹೊರವಲಯದ ಹಾದಿ ಬಸವಣ್ಣ ಆಸರೆ ಕಾಲೊನಿ ಬಳಿ ನಡೆದಿದೆ.

Join Our Whatsapp Group

ಮೃತರನ್ನು ಶಾಮಿದಸಾಬ್ ಕಿಡದೂರನಾಯಕ್ (65) ಮೌಲಾಸಾಬ್ ಕಿಡದೂರನಾಯಕ್ (60) ಹಾಗೂ ಇಮಾಮಬಿ ಕಿಡದೂರನಾಯಕ್ (60) ಎಂದು ಗುರುತಿಸಲಾಗಿದೆ.

ಇವರು ಕುಷ್ಟಗಿ ತಾಲ್ಲೂಕಿನ ತಾವರಗೇರಿಯವರು. ವಿಜಯಪುರದಲ್ಲಿ ನಡೆದ ಜವಳದ ಕಾರ್ಯಕ್ರಮ ಮುಗಿಸಿಕೊಂಡು ಮರಳುತ್ತಿರುವಾಗ ಈ ಅವಘಡ ಸಂಭವಿಸಿದೆ.

ಅಪಘಾತಕ್ಕೊಳಗಾದ ವಾಹನದಲ್ಲಿ 17 ಜನರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ನಗರದ ಹಾಗೂ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.