ಮನೆ ರಾಜಕೀಯ ವಿಧಾನಸಭಾ ಚುನಾವಣೆ: ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ವಿಧಾನಸಭಾ ಚುನಾವಣೆ: ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

0

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆರನೇ ಪಟ್ಟಿಯನ್ನು (ಐದು ಅಭ್ಯರ್ಥಿಗಳು) ಕಾಂಗ್ರೆಸ್‌ ಬುಧವಾರ ತಡ ರಾತ್ರಿ ಪ್ರಕಟಿಸಿದೆ.

Join Our Whatsapp Group

ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.  ಈ ಮೂಲಕ ಕಾಂಗ್ರೆಸ್​ ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಮಂಗಳೂರು ನಗರ ಉತ್ತರಕ್ಕೆ ಇನಾಯತ್‌ ಉಲ್ಲಾ ಹಾಗೂ ಸಿ.ವಿ.ರಾಮನ್‌ ನಗರಕ್ಕೆ ಎಸ್‌. ಆನಂದ್‌ ಕುಮಾರ್‌ ಅವರನ್ನು ಹುರಿಯಾಳುಯನ್ನಾಗಿ ಮಾಡಲಾಗಿದೆ.

ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಮೊಹಮ್ಮದ್‌ ಶಲಾಂ, ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್‌ ಗೌಡ ಹಾಗೂ ಅರಕಲಗೂಡು ಕ್ಷೇತ್ರಕ್ಕೆ ಎಚ್.ಪಿ. ಶ್ರೀಧರ್‌ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.