ಮನೆ ರಾಷ್ಟ್ರೀಯ ಕೇರಳ ಟೂರಿಸ್ಟ್ ಬೋಟ್‌ ದುರಂತ, ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಕೇರಳ ಟೂರಿಸ್ಟ್ ಬೋಟ್‌ ದುರಂತ, ಸಾವಿನ ಸಂಖ್ಯೆ 22ಕ್ಕೆ ಏರಿಕೆ

0

ಕೇರಳದ ಮಲಪ್ಪುರಂ ಜಿಲ್ಲೆಯ ಕಡಲತೀರದ ಬಳಿ ಭಾನುವಾರ ಸಂಜೆ 7 ಗಂಟೆಗೆ ಡಬಲ್ ಡೆಕ್ಕರ್ ಬೋಟ್ ಮುಳುಗಿ, ಅದರಲ್ಲಿದ್ದ ಪ್ರವಾಸಿಗರು, ಮಕ್ಕಳು 7 ಮಂದಿ ಸೇರಿದಂತೆ ಒಟ್ಟು 22 ಮಂದಿ ಸಾವ್ನನಪ್ಪಿದ್ದು, ನಾಪತ್ತೆಯಾದವರ ಹುಡುಕಾಟ ಮುಂದುವರಿದಿದೆ. ಬೋಟ್ ಗೆ ಲೈಸೆನ್ಸ್‌ ಕೂಡಾ ಇಲ್ಲ ಎಂದು ತಿಳಿದುಬಂದಿದ್ದು, ಬೋಟ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಧಾನಿ ಮೋದಿ ಸಂತಾಪ ಸೂಚಿಸಿ, ಪರಿಹಾರ ಘೋಷಣೆ ಮಾಡಿದ್ದಾರೆ.

ಕೇರಳದ ತುವಲ್ತಿರಮ್ ಬೀಚ್ ನ ಮಲಪ್ಪುರಂ ತನೂರ್ ಪ್ರದೇಶದಲ್ಲಿ ನಿನ್ನೆ ಸಂಜೆ 7 ಗಂಟೆ ವೇಳೆಗೆ ಈ ಅವಘಡ ನಡೆದಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತರಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.