ಮನೆ ರಾಜ್ಯ ಕಾಂಗ್ರೆಸ್ ಅವನತಿಯ ಸಮಯಕ್ಕೆ ಪುನರ್ಜನ್ಮ ನೀಡಿದ ಜನತೆ: ಜಿಟಿಡಿ

ಕಾಂಗ್ರೆಸ್ ಅವನತಿಯ ಸಮಯಕ್ಕೆ ಪುನರ್ಜನ್ಮ ನೀಡಿದ ಜನತೆ: ಜಿಟಿಡಿ

0

ಮೈಸೂರು: ಕಾಂಗ್ರೆಸ್ ಅವನತಿಯ ಸಮಯಕ್ಕೆ ಜನ ಮತ ನೀಡಿ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.

Join Our Whatsapp Group

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್’ನ ಜಿ.ಟಿ ದೇವೇಗೌಡ ಅವರು ವಿಜಯಶಾಲಿಯಾಗಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್’ನ ಎಸ್. ಸಿದ್ದೇಗೌಡ ಅವರು ಪ್ರಬಲ ಪೈಪೋಟಿ ನೀಡಿದ್ದರು.

ಈ ಕುರಿತಾಗಿ ಮಾತನಾಡಿದ ಅವರು, ಕಾಂಗ್ರೆಸ್ ಅವನತಿಯ ಸಮಯಕ್ಕೆ ಜನ ಮತ ನೀಡಿ ಪುನರಜನ್ಮ ಕೊಟ್ಟಿದ್ದಾರೆ. ಈ ಕ್ಷೇತ್ರದ ಜನರು ಜೆಡಿಎಸ್ ಪಕ್ಷವನ್ನು ಕೈ ಬಿಟ್ಟಿಲ್ಲ. ಎಲ್ಲಾ ಮತದಾರರು, ಮುಖಂಡರು ಹಾಗೂ ಪಕ್ಷದ ನಾಯಕರು ಕಾರ್ಯಕರ್ತರಿಗೆ ಕೃತಜ್ಱತೆ ಸಲ್ಲುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ಕರ್ನಾಟಕ. ಇದೀಗ ಕಾಂಗ್ರೆಸ್ ಗೆ ಶಕ್ತಿ ತುಂಬಿರುವುದು ಕರ್ನಾಟವಾಗಿದೆ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ ಎನ್ನುವ ಸಂಧರ್ಭದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಜನ ಮತ ನೀಡಿ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಜಟಿ ದೇವೇಗೌಡ ಅವರು 24,994 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್. ಸಿದ್ದೇಗೌಡ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಇಲ್ಲಿ ಬಿಜೆಪಿಯಿಂದ ಕವೀಶ್ ಗೌಡ ಅವರು ಸ್ಪರ್ಧೆ ಮಾಡಿದ್ದರು. ಆಮ್ ಆದ್ಮಿ ಪಾರ್ಟಿಯಿಂದ ಜಯಶ್ರೀ ಕಿರಣ್ ನಾಗೇಶ್ ಕಲ್ಯಾಣಿ ಕಣಕ್ಕೆ ಇಳಿದಿದ್ದರು.