ಮನೆ ರಾಜಕೀಯ ಕಾಂಗ್ರೆಸ್‌ ನ ಗ್ಯಾರಂಟಿ ಸೂತ್ರಗಳು ದೇಶವನ್ನು ದಿವಾಳಿಯೆಡೆಗೆ ತಳ್ಳಬಹುದು: ಪ್ರಧಾನಿ ಮೋದಿ

ಕಾಂಗ್ರೆಸ್‌ ನ ಗ್ಯಾರಂಟಿ ಸೂತ್ರಗಳು ದೇಶವನ್ನು ದಿವಾಳಿಯೆಡೆಗೆ ತಳ್ಳಬಹುದು: ಪ್ರಧಾನಿ ಮೋದಿ

0

ರಾಜಸ್ಥಾನ: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಹೆಣೆದಿದ್ದ ಗ್ಯಾರಂಟಿ ಸೂತ್ರಗಳು ದೇಶವನ್ನು ದಿವಾಳಿಯೆಡೆಗೆ ತಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

Join Our Whatsapp Group

ಇದೇ ಸೂತ್ರಗಳು ಬೇರೆ ಎಲ್ಲಾ ಕಡೆ ಇದೇ ಸೂತ್ರವನ್ನು ಬಳಕೆ ಮಾಡಿದ್ದಲ್ಲಿ, ದೇಶವು ದಿವಾಳಿಯಾಗಲಿದೆ ಎಂದಿದ್ದಾರೆ. ಬುಧವಾರ ರಾಜಸ್ಥಾನದ ಅಜ್ಮೇರ್ ​ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ರಾಜ್ಯ ಚುನಾವಣೆಗಳಿಗಾಗಿ ಗ್ಯಾರಂಟಿ ಸೂತ್ರಗಳನ್ನು ಸೃಷ್ಟಿಸಿದೆ. ಆದರೆ ಅವರು ತಾವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಾರಾ? ಕಲ್ಯಾಣಕ್ಕಾಗಿ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುದು ಜನ ಪ್ರಶ್ನೆಯಾಗಿದೆ.

ಚುನಾವಣೆಗೆ ಕೇವಲ ಐದು ತಿಂಗಳಿರುವಾಗ, ಅಶೋಕ್ ಗೆಹ್ಲೋಟ್ ಆಡಳಿತವು ಉಚಿತ ವಿದ್ಯುತ್ ಮತ್ತು ಅಗ್ಗದ ಅಡುಗೆ ಅನಿಲ ಸೇರಿದಂತೆ ಕೆಲವು ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಬಡವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ ನ ನೀತಿಯಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ದೇಶದ ರಕ್ತವನ್ನು ಹೀರುವ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ ಭ್ರಷ್ಟ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದರು.

ಈಗ ದೇಶದಲ್ಲಿ ಬಿಜೆಪಿ ಸರ್ಕಾರದಿಂದಾಗಿ ಜಗತ್ತು ಭಾರತದ ಬಗ್ಗೆ ಮಾತನಾಡುತ್ತಿದೆ. ಕಳೆದ 9 ವರ್ಷಗಳಲ್ಲಿ ತಮ್ಮ ಸರ್ಕಾರ ಜನರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ಬಡತನವನ್ನು ಅಂತ್ಯಗೊಳಿಸಲು ಭಾರತ ಹತ್ತಿರದಲ್ಲಿದೆ ಎಂದರು.