ಆಕರ್ಣ ಧನುರಾಸನದ ಪೂರ್ಣಸ್ಥಿತಿಯಲ್ಲಿ ಶರೀರದ ಆಕೃತಿಯು ಕಿವಿಯ ವರೆಗೆ ಎ(ಹೆ)ದೆಯನ್ನೇರಿಸಿದ ಧನುಸ್ಸಿನಂತೆ ಕಂಡುಬರುವುದು. ಆದ್ದರಿಂದಲೇ ಆಕರ್ಣ ಧನುರಾಸನವೆಂಬ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ.
ಮಾಡುವ ಕ್ರಮ
1) ಯೋಗಾಭ್ಯಾಸಿಯು ಪ್ರಾರಂಭದಲ್ಲಿ ತನ್ನ ಎರಡೂ ಕಾಲುಗಳನ್ನು ನೆಲದ ಮೇಲೆ ಮುಂದಕ್ಕೆ ಚಾಚಿ, ಎದೆ ಎತ್ತಿ ನೇರವಾಗಿ ಕುಳಿತುಕೊಳ್ಳಬೇಕು.
2) ಅನಂತರ ಎಡಗೈಯಿಂದ ಚಾಚಿರುವ ಬಲಗಾಲಿನ ಹೆಬ್ಬೆರಳನ್ನು ಭದ್ರವಾಗಿ ಹಿಡಿದುಕೊಳ್ಳಬೇಕು (ಆದರೆ ಬಲಗಾಲನ್ನು ಬಗ್ಗಿಸಬಾರದು)
3) ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಎಡಗಾಲಿನ ಪಾದವನ್ನು ಬಲಗೈಯಿಂದ ಹಿಡಿದು ಕಿವಿಯವರೆಗೂ ಒಯ್ಯಬೇಕು. (ಈ ಸ್ಥಿತಿಯಲ್ಲಿ ಎಡಗಾಲು ಚಿತ್ರದಲ್ಲಿರುವಂತೆ ಬಲಗಾಲು ಮತ್ತು ಎಡಗೈ ನಡುವಿನಲ್ಲಿ ಇರಬೇಕು.) ಅನಂತರ ಬೆನ್ನನ್ನು ಸಾಧ್ಯವಾದಷ್ಟೂ ನೇರಮಾಡಿ ಅರ್ಧ ನಿಮಿಷದವರೆಗೆ ಇದೇ ಸ್ಥಿತಿಯಲ್ಲಿದ್ದು ಅನಂತರ ಇನ್ನೊಂದು ಕಾಲಿನಿಂದಲೂ ಇದೇ ಕ್ರಿಯೆಯನ್ನು ಮಾಡಬೇಕು. ಈ ಆಸನದ ಅಭ್ಯಾಸದಲ್ಲಿ ಅನೇಕ ರೀತಿಯ ವ್ಯತ್ಯಾಸಗಳೂ ಇವೆ.
ಲಾಭಗಳು:
ಬೆನ್ನು ಮತ್ತು ಎದೆಯೊಳಗಿನ ಅನೇಕ ದೋಷಗಳು ದೂರವಾಗುವವು. ಉದರಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ನಿವಾರಣೆಯಾಗುವುವು. ಕಾಲುಗಳ ಮಂಡಿ ಮತ್ತು ಕೀಲುಗಳಲ್ಲಿನ ಗಡಸುತನ ನಿವಾರಣೆಯಾಗುವುದು. ವಿಶೇಷವಾಗಿ ಈ ಆಸನವು ಮಲವಿಸರ್ಜನೆಗೆ ಉಪಕಾರಿ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.