ಮನೆ ಅಪರಾಧ ರಾತ್ರೋರಾತ್ರಿ ಯುವಕನನ್ನು ಹೊತ್ತೊಯ್ದು ಕೊಲೆ

ರಾತ್ರೋರಾತ್ರಿ ಯುವಕನನ್ನು ಹೊತ್ತೊಯ್ದು ಕೊಲೆ

0

ಬೆಳಗಾವಿ:  ರಾತ್ರೋರಾತ್ರಿ  ಮನೆಗೆ ನುಗ್ಗಿ  ಹಲ್ಲೆ ಮಾಡಿ ಯುವಕನನ್ನು ಹೊತ್ತೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ರಣಕುಂಡೆ ಗ್ರಾಮದಲ್ಲಿ ನಡೆದಿದೆ.

30 ವರ್ಷದ  ನಾಗೇಶ್ ಪಾಟೀಲ್ ಕೊಲೆಯಾದ ಯುವಕನಾಗಿದ್ದಾ‌ನೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನ ಮನೆಗೆ ಬಂದು ಹಂತಕರು ದಾಂಧಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ದುಷ್ಕರ್ಮಿಗಳ ತಂಡ ಯುವಕನ ಎಳೆದೊಯ್ದು ಹತ್ಯೆ ಮಾಡಿ ಮನೆ ಬಳಿ ಶವ ಬಿಸಾಕಿ ಪರಾರಿಯಾಗಿದ್ದಾರೆ.

ಅಲ್ಲದೆ ಆತನ ಸಹೋದರ ಮೋಹನ್ ಪಾಟೀಲ್ ಹಾಗೂ ತಾಯಿ ಮೇಲೂ ಹಲ್ಲೆ ಮಾಡಿದ್ದಾರೆ. ಮೃತ ನಾಗೇಶ್  ಕಿರಿಯ ಸಹೋದರ ಗುಜರಾತ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ‌ಮಾಡುತ್ತಿದ್ದರೆ ಇನ್ನೊಬ್ಬ‌ ಸಹೋದರ ತಾಯಿ ಜೊತೆಗೆ  ವಾಸವಾಗಿದ್ದ. ಇನ್ನು ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ತಪ್ಪಿತಸ್ಥರಿಗೆ  ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಮೃತ ನಾಗೇಶ್ ಪಾಟೀಲ್ ಈ  ಮುಂಚೆ ನೇವಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಒಂದೇ ವರ್ಷದಲ್ಲಿ ಆ ಕೆಲಸಕ್ಕೆ ರಾಜೀನಾಮೆ ನೀಡಿ ಅರ್ಧಕ್ಕೆ ಬಿಟ್ಟು ಬಂದಿದ್ದು,  ಈಗ ಗುಜರಾತ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯ ಕೆಲಸ ಮುಗಿಸಿ ರಜೆ ಮೇಲೆ ಬಂದಿದ್ದ ನಾಗೇಶ್ ಪಾಟೀಲ್  ವಾಪಸ್ ಗುಜರಾತ್ ಗೆ ತೆರಳಲು  ಟಿಕೆಟ್  ಬುಕ್ ಕೂಡ ಮಾಡಿದ್ದ , ಅಷ್ಟರಲ್ಲೇ ಬಾರದ ಲೋಕಕ್ಕೆ ನಾಗೇಶ್ ಪಾಟೀಲ್ ಹೊರಟು ಹೋಗಿದ್ದಾನೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಿದ್ದಾರೆ.  ಈಗಾಗಲೇ ಕೊಲೆ ಸುಳಿವು ಸಿಕ್ಕಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಮೂರು ಜನರನ್ನು ವಶಕ್ಕೆ  ಪಡೆದು  ಆರೋಪಿಗಳಿಗಾಗಿ ತನಿಖೆ ನಡೆಸಿದ್ದಾರೆ. ‌