ಮನೆ ಕಾನೂನು ಹೋಟೆಲ್ ನಲ್ಲಿ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ: ಕ್ರಮ ಕೈಗೊಳ್ಳದ ಅಶೋಕನಗರ ಇನ್ಸ್​ಪೆ ಕ್ಟರ್ ಅಮಾನತು

ಹೋಟೆಲ್ ನಲ್ಲಿ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ: ಕ್ರಮ ಕೈಗೊಳ್ಳದ ಅಶೋಕನಗರ ಇನ್ಸ್​ಪೆ ಕ್ಟರ್ ಅಮಾನತು

0

ಬೆಂಗಳೂರು: ಸಾಕಷ್ಟು ದಿನಗಳಿಂದ ಹೋಟೆಲ್ ವೊಂದರಲ್ಲಿ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಹಿನ್ನಲೆ​ ಅಶೋಕನಗರ ಇನ್ಸ್​ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.

Join Our Whatsapp Group

ಜೂನ್ 17 ರಂದು ಅಶೋಕನಗರ ಠಾಣಾ ವ್ಯಾಪ್ತಿಯ ದಿ ಪ್ರೈಡ್ ಹೋಟೆಲ್ ಮೇಲೆ ಕೆಲವು ದಿನಗಳ ಹಿಂದೆ ಸಿಸಿಬಿ ದಾಳಿ ಮಾಡಿ, ಯುವತಿಯರನ್ನ ಕರೆತಂದು ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ವರದಿ ನೀಡಿತ್ತು. ಮಾಡಿದ್ದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಅವರು ಈ ಕುರಿತು ತನಿಖೆ ಮಾಡಿಮ ಇನ್ಸ್ ಪೆಕ್ಟರ್ ವಿರುದ್ದ ಕಮಿಷನರ್ ​ಗೆ ವರದಿ ಸಲ್ಲಿಸಿದ್ದರು.

ವರದಿ ಪರಿಶೀಲಿಸಿದ ಕಮಿಷನರ್ ದಯಾನಂದ್, ಕರ್ತವ್ಯ ಲೋಪದ ಹಿನ್ನಲೆ ಅಶೋಕನಗರ ಇನ್ಸ್ ಪೆಕ್ಟರ್ ಶ್ರೀಕಾಂತ್ ತೋಟಗಿಯವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.