ಮನೆ ರಾಜ್ಯ ಬಿಟ್​ ಕಾಯಿನ್ ಹಗರಣ ತನಿಖೆಗೆ ಎಸ್ ​ಐಟಿ ರಚನೆಗೆ ಆದೇಶ: ಡಾ. ಜಿ. ಪರಮೇಶ್ವರ

ಬಿಟ್​ ಕಾಯಿನ್ ಹಗರಣ ತನಿಖೆಗೆ ಎಸ್ ​ಐಟಿ ರಚನೆಗೆ ಆದೇಶ: ಡಾ. ಜಿ. ಪರಮೇಶ್ವರ

0

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್​ ಕಾಯಿನ್ ಹಗರಣ ತನಿಖೆಗೆ ಎಸ್ ​ಐಟಿ ರಚನೆಗೆ ಆದೇಶಿಸಿದ್ದು, ಆದಷ್ಟು ಬೇಗ ತನಿಖೆ ಮುಗಿಸಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

Join Our Whatsapp Group

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ ಬಗ್ಗೆ ತನಿಖೆ ನಡೆಸಲು ಸಿಐಡಿ ಅಡಿ ಎಸ್ ​ಐಟಿ ರಚಿಸಿ ಆದೇಶ ಹೊರಡಿಸಿದ್ದೇವೆ. ಎಸ್ ​ಐಟಿ ಜೊತೆಗೆ ತಾಂತ್ರಿಕ ತಜ್ಞರ ಸಹಾಯ ಬೇಕಾದರೆ ಉಪಯೋಗ ಮಾಡಬಹುದು. ಅದಕ್ಕೆ ಪೂರಕವಾದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದರು.

ಬಿಟ್ ಕಾಯಿನ್ ಹಗರಣದಲ್ಲಿ ಏನೆಲ್ಲಾ ಮುಚ್ಚಿ ಹಾಕಲಾಗಿದೆ ಅದನ್ನು ಮರು ತನಿಖೆ ಮಾಡುತ್ತೇವೆ. ನಿಜ ಸ್ಥಿತಿ ಏನಿದೆ ಎಂಬ ಬಗ್ಗೆ ತನಿಖೆ ಆಗಲಿದೆ. ಎಡಿಜಿಪಿ ಮನೀಷ್ ನೇತೃತ್ವದಲ್ಲಿ ಎಸ್ ಐಟಿ ರಚನೆ ಮಾಡಲಾಗಿದೆ. ಅವರು ತನಿಖೆಗೆ ಯಾವ ತಾಂತ್ರಿಕ ತಜ್ಞರು ಬೇಕು, ಅವರ ಸಹಾಯ ಪಡೆಯಬಹುದು. ಆದಷ್ಟು ಬೇಗ ತನಿಖೆ ಮುಗಿಸುವಂತೆ ಕೇಳಿದ್ದೇವೆ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರ ವೈಎಸ್ ​ಟಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ವೈಎಸ್ ​ಟಿ ತೆರಿಗೆ ಬಗ್ಗೆ ನನಗೆ ಗೊತ್ತಿಲ್ಲ. ಅವರು ಯಾವೆಲ್ಲಾ ಎಸ್​ ಟಿ ಹಾಕಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಹೆಚ್ ​ಡಿಕೆ ಈ ಬಾರಿ ಸದನಕ್ಕೆ ಬರುತ್ತೇನೆ ಎಂದಿದ್ದಾರೆ‌. ಆಗ ಅವರನ್ನೇ ಕೇಳಿ ಎಂದು ತಿಳಿಸಿದರು.