ಮನೆ ಅಪರಾಧ ಬ್ಯಾಂಕ್ ಖಾತೆ ದಾಖಲಾತಿ ಸಲ್ಲಿಕೆ ನೆಪದಲ್ಲಿ ರೈತನಿಗೆ 1.19 ಲಕ್ಷ ವಂಚನೆ

ಬ್ಯಾಂಕ್ ಖಾತೆ ದಾಖಲಾತಿ ಸಲ್ಲಿಕೆ ನೆಪದಲ್ಲಿ ರೈತನಿಗೆ 1.19 ಲಕ್ಷ ವಂಚನೆ

0

ವಿರಾಜಪೇಟೆ: ಕೆ.ವೈ.ಸಿ. ಅಪ್ ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ ಹೆದರಿಸಿ, ಖಾತೆ ವಿವರಗಳನ್ನು ಪಡೆದು ರೈತರೊಬ್ಬರ ಬ್ಯಾಂಕ್ ಖಾತೆಯಿಂದ 1.19 ಲಕ್ಷ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ.        

Join Our Whatsapp Group

ವಿರಾಜಪೇಟೆ ತಾಲೂಕು ಕಡಂಗ ಮರೂರು ಗ್ರಾಮದ ರೈತ ಬಿ.ಎಲ್. ರಾಮಚಂದ್ರ (64)ವಂಚನೆಗೊಳಗಾಗಿದ್ದು, ಇವರ ಮೊಬೈಲಿಗೆ 7477396141 ಸಂಖ್ಯೆಯಿಂದ ಪ್ರತಾಪ್ ಗೌಡ ಎಂಬ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ತಾನು ಕೆನರಾ ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿಯೂ, ಕೆ.ವೈ.ಸಿ ಅಪ್ ಡೇಟ್ ಮಾಡದಿದ್ದಲ್ಲಿ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ ಎಂದು ಹೆದರಿಸಿದ್ದಾನೆ.

ನಂತರ ರಾಮಚಂದ್ರ ಅವರಿಂದ ಎಟಿಎಂ ಕಾರ್ಡ್ ನಂಬರ್ ಹಾಗೂ ಆಧಾರ್ ನಂಬರ್ ಅನ್ನು ಮತ್ತು ಓಟಿಪಿ ಸಂಖ್ಯೆಯನ್ನು ಪಡೆದಿದ್ದಾನೆ. ನಂತರ ಇವರ ಖಾತೆಯಿಂದ ಮೂರು ಹಂತಗಳಲ್ಲಿ ಒಟ್ಟು 1,19,448 ರೂ. ಅಕ್ರಮವಾಗಿ ವರ್ಗಾವಣೆ ಆಗಿದೆ. ಈ ಸಂಬಂಧ ವಿರಾಜಪೇಟೆ ಗ್ರಾಮ ಪಂಚಾಯಿತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.